“ ಶ್ರೀ ವೀತರಾಗಾಯನಮಃ ”
“ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ” - ಮನುಸ್ಮೃತಿ
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಬಗ್ಗೆ
ಹೆಣ್ಣು ಸಮಾಜದ ಕಣ್ಣು ಈ ತತ್ವದಡಿಯಲ್ಲಿ ನಮ್ಮ ಜೈನ ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರವಾದದ್ದು, ಈ ಪೈಕಿ ವೀರರಾಣಿಯರಾದ "ಉಲ್ಲಾಳದ ರಾಣಿ ಅಬ್ಬಕ್ಕ ದೇವಿ ". ಭಟ್ಕಳದ ಹಾಡುವಳ್ಳಿಯ ( ಸಂಗೀತಪುರ ) "ಮೆಣಸಿನ ರಾಣಿ - ರಾಣಿ ಚೆನ್ನಬೈರಾ ದೇವಿ ". " ಸಂಚಿಯ ಹೊನ್ನಮ್ಮ" "ಅತ್ತಿಮಬ್ಬೆ"ಯರಂತಹ ಜೈನ ಮಾತೆಯರ ಕೊಡುಗೆ ಸಮಾಜಕ್ಕೆ ಮಹತ್ವವಾಗಿದೆ ವೀರ ಮಹಿಳೆ "ಜಕ್ಕಿಯಬ್ಬೆ ". ಅಜಿತ ಸೇನಾಚಾರ್ಯರ ಶಿಷ್ಯರಾಗಿ ಗಂಗಾರಾಜನ ಸೇನಾ ಪಡೆಯಲ್ಲಿ ಸೇನಾ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
" ರತಿದೇವಿ ಅಕ್ಕ" ಹಾಗೂ " ಮಲ್ಲಿಕಬ್ಬೆ " ಕೂಡ ಶ್ರವಣಬೆಳಗೊಳದಲ್ಲಿದ್ದ ದವಲಾ -ಜಯದವಲಾ ಗ್ರಂಥದ ಪ್ರತಿಯೊಂದನ್ನ, ಲಿಪಿ ಬದ್ಧವನ್ನಾಗಿ " ಜಿನ್ನಾ" ಹಾಗೂ "ಉದಿಯಾದಿತ್ಯ "ರೆಂಬ ಲೇಖಕರಿಂದ 1112 ರಲ್ಲಿ ಪ್ರತಿಗಳನ್ನು ತಾಳೆಗರಿಯಲ್ಲಿ ಬರೆಸಿ ಮೂಡಬಿದ್ರೆಯಲ್ಲಿ ಇಡಲಾಯಿತು.
ಗಂಗರಸ ಮಂತ್ರಿಯ ಚಾವುಂಡರಾಯನ ತಾಯಿ "ಕಾಳಲಾ ದೇವಿ" ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ಸ್ಥಾಪನೆಗೆ ಕಾರಣರಾದರು.
ಹಿಂದಿನ ಯಾದಗಿರಿ ಜಿಲ್ಲೆಯ ಹುಣಸಿಹಡಗಲಿಯಲ್ಲಿ ಜಿನ ಮಂದಿರವನ್ನು ಕಟ್ಟಿಸಿದ 12ನೇ ಶತಮಾನದ "ರಾಣಿ ಚಂದನ ದೇವಿ " ಆಗಿದ್ದಳು
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕರಡಾಳು ಗ್ರಾಮ 11ನೇ ಶತಮಾನದಲ್ಲಿ ಪ್ರಸಿದ್ಧ ಜೈನ ಕ್ಷೇತ್ರವಾಗಿತ್ತು. ಇಲ್ಲಿ ಹಲವು ಜೈನ ಕುಟುಂಬಗಳು ಧರ್ಮ ನಿಷ್ಠೆ ಕಾರ್ಯದಲ್ಲಿ ತೊಡಗಿದ್ದವು. ಕರಡಾಳು ಗ್ರಾಮದ ಭೂವ ನಾಯಕ ಹೊಯ್ಸಳ ದೊರೆ ವೀರ ನರಸಿಂಹ ಒಂದನೇ ಬಲ್ಲಾಳನ ಸೇನಾಧಿಪತಿಯಾಗಿದ್ದ.
ಹರ್ಯಲೇ ಮಹಾಪತಿವ್ರತೆ ಕರಡಾಳು ಗ್ರಾಮದಲ್ಲಿ ಈಗಲೂ ಜೈನ ಬಸದಿ ಇದೆ . ಇದನ್ನ "ಹರ್ಯಲೇ ಜೈನಬಸದಿ ". ಎಂದು ಕರೆಯಲಾಗುತ್ತದೆ. ಇಲ್ಲಿ ಹರ್ಯಲೇಯು ಸಲ್ಲೇಖನ ರಥ ಸ್ವೀಕರಿಸಿದ್ದಳು.
12ನೇ ಶತಮಾನದ ಕನ್ನಡದ ಪ್ರಪ್ರಥಮ ಕವಿಯತ್ರಿ ಸಾಹಿತ್ಯದಲ್ಲಿ ಮೊದಲಿಗರಾದ "ವಾಗ್ದೇವಿ ಕಂತಿ" ಯೆಂಬ ಮಹಿಳೆ ಇದ್ದಳು.





ಜಿನ ಭಕ್ತಿ ಹೊಂದಿದ ಮಹಾನ್ ಪಂಡಿತೇ, ಕವಿಯತ್ರಿ, ಸಾಹಿತಿಯಾಗಿದ್ದ. "ಜಕ್ಕಲಾಂಬೆ". ಅನ್ಯ ಮತಾವಲಂಬಿಗಳಿಂದ ಶೋಷಿತಳಾಗಿ ಕೊಲ್ಲಲ್ಪಟ್ಟಳು,ಆ ಸಮಯದಲ್ಲಿ ಅದೇ ದುರಾಳರು ಜೈನ ಬಸದಿಗಳನ್ನು ಹಾಳು ಗೆಡವಿದ್ದಲ್ಲದೆ ಮುನಿಗಳನ್ನು ಶೋಷಿಸಿದರು.
ಜೈನ ಧರ್ಮ ವಿಶ್ವಧರ್ಮವಾಗಿದ್ದು ,ಸಮಾಜದ ಶಾಂತಿ, ಅಹಿಂಸೆ ,ಸಂಸ್ಕೃತಿ ಸಂಸ್ಕಾರದ ಅಳಿವು ,ಉಳಿವು ,ಏಳಿಗೆಗೆ ಮಹತ್ವದ ಕೊಡುಗೆ ನೀಡಿದೆ .ಆದರೆ ಆಧುನಿಕತೆಯ ಜಂಜಾಟ ಉದಾರಿಕರಣ , ಪಾಶ್ಚಿಮಾತ್ಯ ಸಂಸ್ಕೃತಿಯ ಸೋಗಿನಿಂದ ಹಾಗೂ ಕೆಲ ಧರ್ಮಗಳ ಆಕ್ರಮಣದಿಂದ ಜೈನ ಧರ್ಮ ಅಳಿವಿನ ಅಂಚಿನತ್ತ ಸಾಗುತ್ತಿದ್ದಾಗ ಶಾಂತಿ ,ಆಹಿಂಸೆ ,ಧರ್ಮ- ಸಂಸ್ಕೃತಿ ಗಳ ರಕ್ಷಣೆಗೆ ಆಗಮಿಸಿದ್ದೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ.
ದಿನಾಂಕ 29.01.1999 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮ ಕರ್ನಾಟಕದ ಜನತೆಗೆ ಅವಿಸ್ಮರಣೀಯವಾದುದ್ದು. ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮ ಹೆಗಡೆಯವರನ್ನು ಕರ್ನಾಟಕದ ಎಲ್ಲಾ ಮಹಿಳಾ ಸಮಾಜಗಳು ಸೇರಿ ಸನ್ಮಾನಿಸಿ, ಸತ್ಕರಿಸಿದ ಸುದಿನ. ಈ ಶುಭ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದೆ "ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ" ಶ್ರೀಮತಿ ಹೇಮಾವತಿ ಹೆಗಡೆಯವರು ಒಕ್ಕೂಟದ ಗೌರವಾಧ್ಯಕ್ಷರಾಗುವುದು ಒಕ್ಕೂಟದ ಗೌರವವನ್ನು ಹೆಚ್ಚಿಸುವುದರ ಜೊತೆಗೆ ಹೆಮ್ಮೆಯ ವಿಷಯವಾಗಿದೆ. ಒಗ್ಗಟ್ಟಿನಿಂದ ಒಂದಾಗಿ ಇರಲು ಎಲ್ಲಾ ಮಹಿಳಾ ಸಮಾಜಗಳು ಒಕ್ಕೂಟಕ್ಕೆ ಸದಸ್ಯರಾಗುವಂತೆ ವಿನಂತಿಸಿಕೊಳ್ಳಲಾಯಿತು. ಒಕ್ಕೂಟ ಸ್ಥಾಪನೆಯಾದಾಗ 50 ಮಹಿಳಾ ಸಮಾಜಗಳು ಸದಸ್ಯರಾಗಿದ್ದರು. ಅದು ಇಂದು 150 ಹೆಚ್ಚು ಸಮಾಜಗಳು ಸದಸ್ಯತ್ವವನ್ನು ಪಡೆದಿವೆ
ಜೈನ ಧರ್ಮದ ಅಭಿವೃದ್ಧಿಯ ಕನಸನ್ನು ಹೊತ್ತ ಧರ್ಮಸ್ಥಳದ ದಿ.ರತ್ನಮ್ಮ ಹೆಗಡೆ ಅವರ ಕನಸನ್ನ ನನಸಾಗಿಸುವ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ತ್ರಿವೇಣಿಯರಾದ ಮಾತೃಶ್ರೀ ಹೇಮಾವತಿ .ವೀ. ಹೆಗಡೆ ,ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು ,ಈ ಜೈನ ಧರ್ಮ ವನ್ನು ಅಭಿವೃದ್ಧಿಪಡಿಸಿ , ಜೈನ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು ಕಿಗೆತ್ತಿಕೊಂಡಿದ್ದಾರೆ.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಇತ್ತೀಚಿನ ದಿನಗಳಲ್ಲಿ ತುಮಕೂರಿನ ಶ್ರೀಮತಿ ಶಾಂತಾ ಸನ್ಮತಿಕುಮಾರ್, ಹುಬ್ಬಳ್ಳಿಯ ಶ್ರೀಮತಿ ನಳಿನಿ ಜವಳಿ, ಹಾಸನದ ಶ್ರೀಮತಿ ಕೇಸರಿ ರತ್ನರಾಜಯ್ಯ, ಮೈಸೂರಿನ ಶ್ರೀಮತಿ ಶೀಲಾ ಅನಂತರಾಜು ಹಾಗೂಬೆಂಗಳೂರಿನ ಶ್ರೀಮತಿ ಪದ್ಮಿನಿ ಪದ್ಮರಾಜ್ ಈ ಸಂಘಟನೆಯ ಏಳಿಗೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ನಾಡಿನಾದ್ಯಂತಸಂಚರಿಸಿ, ಸಂಘಟಿಸಿ, ಏಳಿಗೆಗಾಗಿ ಶ್ರಮಿಸಿದ್ದು, ಈಗ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಂಘಟನೆಯ ಸಾರತ್ಯವನ್ನು ಕರ್ನಾಟಕದದಾವಣಗೆರೆಯ ಶ್ರೀಮತಿ ಪದ್ಮಪ್ರಕಾಶ್ ಹೊತ್ತಿದ್ದಾರೆ.
ಒಕ್ಕೂಟದ ಉದ್ದೇಶಗಳು

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಕರ್ನಾಟಕದ ಎಲ್ಲ ಜೈನ ಮಹಿಳೆಯರನ್ನೊಳಗೊಂಡ ಒಂದೇ ವೇದಿಕೆಯನ್ನು ರಚಿಸುವುದು.

ಇಂಟರ್ನೆಟ್
ಕಲಿಕೆ
ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಅಂತರ್ಜಾಲದ (ಇಂಟರ್ನೆಟ್) ಕಲಿಕೆಯ ಬಗ್ಗೆ ಮಾಹಿತಿ ನೀಡುವುದು.

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ ಸಾಧಿಸಿ ಜೈನ ಮಹಿಳೆಯರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು.

ಚಿಂತನ,
ಮಂಥನ
ಕಾರ್ಯಕ್ರಮಗಳನ್ನು ಆಯೋಜಿಸಿ, ಚಿಂತನ, ಮಂಥನ-ವಿಚಾರ ವಿನಿಮಯ ಜ್ಞಾನ ಪ್ರಸಾರಕ್ಕೆ ಅವಕಾಶ ಒದಗಿಸುವುದು

ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ
ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಹಾಯ ನೀಡುವುದು.

ಅರೋಗ್ಯದ ಬಗ್ಗೆ ಮಾಹಿತಿ
ಮಹಿಳೆಯ ಅರೋಗ್ಯದ ಬಗ್ಗೆ ಮಾಹಿತಿ ಹಾಗು ತಪಾಸಣೆ ಶಿಬಿರವನ್ನು ಏರ್ಪಡಿಸುವುದು.

ಕಾನೂನಿನ ಬಗ್ಗೆ ಮಾಹಿತಿ
ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವುದು.

ಪ್ರತಿಭೆಗಳನ್ನ ಗುರುತಿಸುವುದು
ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವುದು.

