ನೂತನ ಕಾರ್ಯಧ್ಯಕ್ಷರ ಪರಿಚಯ :
ಬಹುಮುಖ ಪ್ರತಿಭೆಯ ಪದ್ಮಪ್ರಕಾಶ್, ಹಲವಾರು ಸಂಘಟನೆ ,ಸಮಾಜ ಸೇವೆ ರಕ್ಷಣೆ ಏನ್.ಸಿ.ಸಿ, ರೈಫಲ್ ಶೂಟಿಂಗ್ ,ಮೆಹಂದಿ ಮಹಿಳಾ ಸಮಾಜ, ರೋಟರಿ ಇನ್ನರ್ವಿಲ್, ಶೈಕ್ಷಣಿಕ ಚಟುವಟಿಕೆ, ಆರೋಗ್ಯ ತಪಾಸಣೆ, ವನಿತ ಸಮಾಜ, ವೃದ್ಧಾಶ್ರಮ, ಟೈಲರಿಂಗ್, ಅನಾಥ ಮಕ್ಕಳಿಗೆ ಶಿಕ್ಷಣ - ವಸತಿ, ಕಂಪ್ಯೂಟರ್ ತರಬೇತಿ ಚಟುವಟಿಕೆಗಳು, ಟೈಲರಿಂಗ್ ತರಬೇತಿ ಮೂಲಕ ಮಹಿಳೆಯರು ಅಭ್ಯುದಯಕ್ಕೆ ಹಲವಾರು ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ಸಂಘಟನೆ ಸಮಾಜ ಸೇವೆಯ ಚತುರೆ .ಸಂಘಟನೆ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿರುವ ಇವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಶ್ರೀಮತಿ ಪದ್ಮಪ್ರಕಾಶ್ ದಾವಣಗೆರೆಯ ಪ್ರತಿಷ್ಠಿತ ಬಿ.ಟಿ. ಮನೆತನದವರು ,ದಿ. ಸನತ ಕುಮಾರ್ ಟಿ.ವಿ ಹಾಗೂ ದಿ. ತ್ರಿಶಾಲದೇವಿಯವರ ಮುದ್ದಿನ ಮಗಳಾಗಿದ್ದು, 1963ರ ಜುಲೈ 9 ರಂದು ಜನನ .ಪ್ರಾಥಮಿಕ- ಪ್ರೌಢ ಶಿಕ್ಷಣವನ್ನು ದಾವಣಗೆರೆಯಲ್ಲಿ ಪಡೆದ ಇವರು ,ಯಶಸ್ಸಿನ ಎಸ್ .ಎಸ್ .ಎಲ್ .ಸಿ .ಶಿಕ್ಷಣವನ್ನ ದಾವಣಗೆರೆಯ ಸೆಂಟ್ ಪೌಲ್ಸ್ ಕಾನ್ವೆಂಟ್ ನಲ್ಲಿ ಪಡೆದರು . ಪಿ.ಯು.ಸಿ ಶಿಕ್ಷಣವನ್ನ ಎ.ವಿ. ಕಮಲಮ್ಮ ಕಾಲೇಜು ದಾವಣಗೆರೆಯಲ್ಲಿ ಪಡೆದ ಇವರು, ಬಿ.ಇ ತಾಂತ್ರಿಕ ಪದವಿಯನ್ನು (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) ದಾವಣಗೆರೆಯ ಜಿ .ಬಿ .ಡಿ .ಟಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದರು.
ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿ ಉತ್ತಮ ವಿದ್ಯಾರ್ಥಿಯಾಗಿದ್ದ ಇವರು ಎನ್. ಸಿ .ಸಿ .ಯಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಸ್ಟ್ ಕ್ರೆಡಿಟ್ ಆಫ್ ಕರ್ನಾಟಕ ಪದಕ ,ಅಖಿಲ ಭಾರತ ಮಟ್ಟದಲ್ಲಿ ಮೂರನೆಯ ಬೆಸ್ಟ್ ಕೆಡೆಟ್ ರಜತ ಪದಕ ,ಕಾಮನ್ ವೆಲ್ತ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ,ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗಿಯಾಗಿ ಆರ್.ಡಿ ಕೆಡೆಟ್ ಎಂಬ ಪದಕ ಪಡೆದರು.
ಸಮಾಜ ಸೇವೆ ,ಮೆಹಂದಿ ಕಲೆ, ಗಾರ್ಡನಿಂಗ್ ಇವರ ಹವ್ಯಾಸಗಳಾಗಿದ್ದು, ದಾವಣಗೆರೆಯ ಪದ್ಮಾಂಬ ಜೈನ ಮಹಿಳಾ ಸಮಾಜ ಇದರ ಅಧ್ಯಕ್ಷರಾಗಿ ಸೇವೆ. ಇದರಲ್ಲಿ ಮಹಿಳೆಯರಿಗೆ ಸ್ಪರ್ಧೆ ಹಾಗೂ ಅಕ್ಕಿ ಪುಂಜನ ಬಗ್ಗೆ ಮಾಹಿತಿ ,ಮಹಿಳಾ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ
ದಾವಣಗೆರೆ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿಯಾಗಿ ,ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು , ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಅವಶ್ಯಕತೆಗಳ ಬಗ್ಗೆ ಸೇವೆ, ಬಡ ಗರ್ಭಿಣಿ ಮಹಿಳೆಯರಿಗೆ ರೋಟರಿ ಕ್ಲಬ್ ನಿಂದ ದಾವಣಗೆರೆ ಇದರ ಸಹಯೋಗದಿಂದ ಮಹಿಳೆಯ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಹಾಗೂ ವಿವಿಧ ಸಮಾಜದ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಹಾಗೂ ಔಷಧಿಗಳ ಪೂರೈಕೆ, ರಸ್ತೆ ಬದಿ ಹೂವು, ಹಣ್ಣು ,ತರಕಾರಿ ಮಾರಾಟಗಾರರ ಸಮಸ್ಯೆಗಳಿಗೆ, ಬೇಸಿಗೆ ಹಾಗು ಮಳೆಗಾಲದ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಗಾರ್ಡನ್ ಕೊಡೆ (ದೊಡ್ಡ ಛತ್ರಿ) ಹಾಗೂ ಟಾರ್ಪಲ್ ಗಳ ವಿತರಣೆ ಮಾಡಿದ್ದಾರೆ.
ದಾವಣಗೆರೆ ಜೈನ್ ಮಿಲನ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸದಸ್ಯರಾಗಿ ಸೇವೆ, ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್( ಜೆ .ಐ.ಟಿ .ಡಿ. )ಸದಸ್ಯರಾಗಿ, ಸಂಚಾಲಕರಾಗಿ, ಧಾರ್ಮಿಕ ಸೇವೆ ,ಪ್ರಸ್ತುತ ದಾವಣಗೆರೆ ವನಿತಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆದರು.
ಮಾಜಿ ಸಚಿವೆ ಡಾ. ನಾಗಮ್ಮ ಕೇಶವಮೂರ್ತಿ ಸಂಘದ ಗೌರವಾಧ್ಯಕ್ಷರಾಗಿದ್ದು ಇದು ತನ್ನ ಅಧೀನದಲ್ಲಿ ಸುಮಾರು 50 ಸಂಸ್ಥೆಗಳನ್ನು ಹೊಂದಿದ್ದು, ವೃದ್ಧಾಶ್ರಮವನ್ನು ಸಹ ಹೊಂದಿದೆ .ವನಿತಾ ಸಮಾಜದಲ್ಲಿ ವಯಸ್ಕರಿಗೆ ವೃದ್ಧಾಶ್ರಮ ,ಅನಾಥ ಹೆಣ್ಣು ಮಕ್ಕಳಿಗೆ ಶಿಕ್ಷಣ ವಸತಿಗಳಿಗಾಗಿ ಪ್ರೇಮಾಲಯ, ಮೂಕ ಹಾಗೂ ಕಿವುಡ ಹೆಣ್ಣು ಮಕ್ಕಳಿಗೆ ವಿಮೋಚನ ವಸತಿ ನಿಲಯ ,ಮೂಕ ಮಕ್ಕಳಿಗೆ ಸಾಹಸ ಸ್ನೇಹಲಯ ಪ್ರೇರಣ, ಜಿಲ್ಲಾ ಮಕ್ಕಳ ಕುಟುಂಬ ಕಲ್ಯಾಣ ಮಂಡಳಿ, ವನಿತ ಡಿಜಿಟಲ್ ಗ್ರಂಥಾಲಯದ ಮೂಲಕ ಯು.ಪಿ.ಎಸ್. ಸಿ. ತರಬೇತಿ ನೀಡುತ್ತಿದ್ದು, ಸಾಧನ ಎಂಜಿನೀರಿಂಗ್ಸ್ ಫೋರಂನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ .ಪ್ರಮುಖವಾಗಿ ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಜಿಲ್ಲಾ ಕಾರ್ಯಗಾರ ನಡೆಸುತ್ತಿದ್ದಾರೆ
ದಾವಣಗೆರೆಯ ಪ್ರತಿಷ್ಠಿತ ಬಿ.ಟಿ ಮನೆತನದ ಇವರು, ದಿ. ಬಿ.ಟಿ. ವಸುಪಾಲ್ ಹಾಗೂ ದಿ. ಸುನಂದ ದೇವಿಯವರ ಮೊಮ್ಮಗಳು. ದಿ. ಬಿ.ಟಿ. ನಾಭಿರಾಜ ಹಾಗೂ ದಿ. ಶ್ರೀಮತಿ ಪದ್ಮಾವತಿ ದಂಪತಿಗಳ ಮೊಮ್ಮಗ ಪಿ.ಬಿ. ಪ್ರಕಾಶ್ ರವರ ಧರ್ಮಪತ್ನಿ. ದಿ. ಡಾ. ಸಿ. ಪ್ರಸನ್ನ ಕುಮಾರ್ - ಸುಜಯ ಪ್ರಸನ್ನ ಕುಮಾರ್ ಅವರ ಸೊಸೆಯಾಗಿದ್ದು, ಮಗಳು, ಅಳಿಯ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ತುಂಬು ಕುಟುಂಬದೊಂದಿಗೆ ಆದರ್ಶ ಜೀವನ ನಡೆಸುತ್ತಿದ್ದಾರೆ.
ಗುರಿಗಳು :
ಕರ್ನಾಟಕ ರಾಜ್ಯ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇವರು ಒಕ್ಕೂಟದ ಪ್ರತಿ ಶಾಖೆಗಳಿಗೆ ಭೇಟಿ ನೀಡಿ ಸದಸ್ಯರುಗಳನ್ನು ಭೇಟಿ ಮಾಡುವುದು, ಹೈದರಾಬಾದ್ - ಕರ್ನಾಟಕದ ವಲಯದಲ್ಲಿ ಮಹಿಳಾ ಒಕ್ಕೂಟವನ್ನು ನಿರ್ಮಿಸುವುದು
ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಅಂತರ್ಜಾಲದ (ಇಂಟರ್ನೆಟ್) ಕಲಿಕೆಯ ಬಗ್ಗೆ ಮಾಹಿತಿ ನೀಡುವುದು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ವೆಬ್ಸೈಟ್ ನಿರ್ಮಾಣ ಮಾಡುವುದು
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟಕ್ಕೆ ಸದಸ್ಯತ್ವ ಹೊಂದಿರುವ ರಾಜ್ಯ ಎಲ್ಲಾ ಮಹಿಳಾ ಸಮಾಜಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಹೊಂದಿಸಿ, ಅದನ್ನು ಅಂತರ್ಜಾಲದಲ್ಲಿ ಹಾಕುವುದು (ಅಪ್ಲೋಡ್ ಮಾಡುವುದು)
ಮೂರು ತಿಂಗಳಿಗೊಮ್ಮೆ ವಲಯ ಸಮ್ಮೇಳನ, ಅಖಿಲ ಕರ್ನಾಟಕ ಒಕ್ಕೂಟದ ಸಮ್ಮೇಳನ, ಪ್ರತಿ ವಲಯದಲ್ಲಿ ಜೈನ ಧರ್ಮದ ಹೊಸ ಹೊಸ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಹಾಗೂ ವಿವಿಧ ಕಾರ್ಯಕ್ರಮಗಳು, ವಲಯ ಹಾಗೂ ರಾಜ್ಯಮಟ್ಟದ ಜೈನ ಧರ್ಮದ ವಿವಿಧ ಸ್ಪರ್ಧೆಗಳು ಮತ್ತು ಮುಂತಾದವುಗಳನ್ನು ನಡೆಸುವ ಉದ್ದೇಶ ಹೊಂದಿದ್ದಾರೆ
ಇವರ ಎಲ್ಲಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪತಿ ಪಿ .ಬಿ .ಪ್ರಕಾಶ್ ಮತ್ತು ಕುಟುಂಬ , ಜೈನ ಬಂಧುಗಳ ಸಹಕಾರದಿಂದ ಇಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಗದ್ದುಗೇರಿದ್ದಾರೆ ಅವರ ಬದುಕು, ಹೋರಾಟ, ಯಶಸ್ವಿಯಾಗಲಿ ಎಂದು ಹಾರೈಸೋಣ.



