ನಮ್ಮ ಸಂಸ್ಥಾಪಕರು
1951 ರ ಏಪ್ರಿಲ್ 2 ರಂದು ಬೆಳ್ತಂಗಡಿ ತಾಲೂಕಿನ "ಪೆರಾಡಿ ಬೀಡಿನ". ಸುಸಂಸ್ಕೃತ ,ಸಜ್ಜನ ,ಸಾಂಪ್ರದಾಯಿಕ ,ಶ್ರೀ ರಘು ಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಅಮ್ಮನವರ ತೃತೀಯ ಪುತ್ರಿ ಯಾಗಿ ಜನಿಸಿದವರು. ತಂದೆಯಿಂದ ಸಾಹಿತ್ಯ ಹಾಗೂ ತಾಯಿಯಿಂದ ಧಾರ್ಮಿಕ ಪ್ರವೃತ್ತಿಯನ್ನು ಬೆಳೆಸಿಕೊಂಡವರು, ಗ್ರಾಮದ ಸರ್ವ ಸಾಮಾನ್ಯ ಜನರೊಂದಿಗೆ ಬೆರೆತು ಸಂವೇದನ ಶೀಲತೆ ಬೆಳೆಸಿಕೊಂಡು ಬೆಳೆದವರು. ಚಿಕ್ಕ ವಯಸ್ಸಿನಲ್ಲಿಯೇ ಸಬಲೀಕರಣದ ಮೌಲ್ಯಗಳನ್ನು ಬೆಳೆಸಿಕೊಂಡರು . .ಉಜಿರೆಯ ಎಸ್. ಡಿ. ಎಂ .ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದ ಇವರು , 1972 ರ ಡಿಸೆಂಬರ್ 27 ರಂದು ತನ್ನ 21ನೇ ವಯಸ್ಸಿನಲ್ಲಿಧರ್ಮಸ್ಥಳದ ಧರ್ಮಾಧಿಕಾರಿ ,ಧರ್ಮಸ್ಥಳದ ಪಟ್ಟಾಧಿಕಾರಿ, ಪೂಜ್ಯ ವೀರೇಂದ್ರ ಹೆಗ್ಗಡೆ ಯವರನ್ನು ವಿವಾಹವಾದ ಇವರು ,ಧರ್ಮಸ್ಥಳದ ಹೆಗ್ಗಡಕುಟುಂಬವನ್ನು ಪ್ರವೇಶಿಸಿದರು. ಸ್ನೇಹ, ಸಹೃದಯ ,ಭಾವನೆಯಿಂದ ಬಂದು- ಬಾಂಧವರೊಂದಿಗೆ ಒಡನಾಟ, ಹೆಗಡೆ ಪೀಠದ ಜವಾಬ್ದಾರಿಯನ್ನರಿತು ಪೂಜ್ಯರೊಡನೆಆದರ್ಶ ದಂಪತಿಯಾಗಿ ಕಂಗೊಳಿಸಿದರು. ಎಲ್ಲರೊಂದಿಗೆ ಮಾತೃಶ್ರೀಯಾಗಿ, ಕ್ಷೇತ್ರದ ನಿತ್ಯ ಕಾರ್ಯಗಳು, ಪೂಜ್ಯರೊಂದಿಗೆ ನಮ್ರತಾ ಭಾವನೆಯಿಂದಪಾಲ್ಗೊಂಡು ,ಹಬ್ಬ -ಹರಿ ದಿನಗಳಲ್ಲಿ ಶ್ರೀ ಕ್ಷೇತ್ರವು ಸದಾ ಕಂಗೊಳಿಸುವಂತೆ ಕಾರ್ಯಕ್ರಮಗಳನ್ನು ರೂಪಿಸುವ ಮುಖೇನ ಶ್ರೀಬಾಹುಬಲಿಪ್ರತಿಷ್ಠಾಪನೆ ,ಮಹಾಮಸ್ತಕಾಭಿಷೇಕಗಳಲ್ಲಿ ಪೂಜ್ಯ ರೊಂದಿಗೆ ಧರ್ಮ ರಕ್ಷಣೆಗೆ ಸನ್ನದ್ಧರಾದರು.
ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮುಖೇನ ಹೆಣ್ಣು ಮಕ್ಕಳಲ್ಲಿ ಸ್ವಾಭಿಮಾನದ ಬೀಜ ಬಿತ್ತಿ ,ಗ್ರಾಮೀಣಾಭಿವೃದ್ಧಿ ಹಾಗು ಕಾರ್ಯಕರ್ತರ ಅಭಿವೃದ್ಧಿಗೆ ಮಂತ್ರಗಳನ್ನು ಬೋಧಿಸಿ ಅವರನ್ನು ತನ್ನ ಕುಟುಂಬದವರಂತೆ ಕಂಡು, ಸಲಹೆ ಸಹಕಾರ ನೀಡಿ ಮಹಿಳೆಯರು ಆಶಾಕಿರಣವಾಗಿ ಸಾಮಾಜಿಕ ಪರಿವರ್ತನೆಯ ರೂವಾರಿಗಳಾಗಿ ,ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆದರು.

ನೊಂದವರ ಪಾಲಿನ ಚೈತನ್ಯದ ಚಿಲುಮೆಯಾಗಿ ಬಡವರ ದುರ್ಬಲರ ಪಾಲಿಗೆ ಧ್ವನಿಯಾಗಿ ,ಧನಿಯಾಗಿ, ಆಶಕ್ತರ ಆಶಾಕಿರಣ ವಾಗಿ ,ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮುಖೇನ ಶ್ರೀ ಮಂಜುನಾಥ, ಅಣ್ಣಪ್ಪ, ಶ್ರೀ ಚಂದ್ರನಾಥ ,ಶ್ರೀ ಬಾಹುಬಲಿ ಪ್ರಸಾದಗಳನ್ನ ಮನೆ ಮನೆಗೆ ಕಳುಹಿಸಿ ನೊಂದ ಜೀವಿಗಳ ಕರುಣಾಮಯವಾಗಿ ಕೌಟುಂಬಿಕ ಸಮಸ್ಯೆಗಳಿಗೆ ಔಷಧಿಯಾಗಿ ,ಕಾರ್ಯಕ್ರಮಗಳ ಮೂಲಕ ಹೊಸ ಶಕ್ತಿ ನೀಡಿದ್ದಾರೆ.
ರೈತರ ಬಾಳನ್ನ ಹಸನು ಮಾಡುವ ದೃಷ್ಟಿಯ ಹಿನ್ನೆಲೆಯಲ್ಲಿ. " ನಮ್ಮೂರು ನಮ್ಮಕೆರೆ". ಕಾರ್ಯಕ್ರಮದ ಅನುಷ್ಠಾನಕ್ಕೆ ಪ್ರೇರಣೆಯಾಗಿ ,ಗ್ರಾಮೀಣ ಜಲ ಸಂವರ್ಧನೆಗೆ ಮಾತೇ ನೇತ್ರಾವತಿಯಾಗಿ ,ಕುಡಿಯುವರಿನಿಂದ ಬಳಲುತ್ತಿದ್ದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿಗಾಗಿ " ಶುದ್ಧ ಗಂಗಾ". ಘಟಕಗಳ ಸ್ಥಾಪನೆ ಮಾಡಿ ಕುಡಿಯುವ ನೀರಿನ ಕೊರತೆ ನೀಗಿಸಿದರು .
ರಂಗಭೂಮಿ, ಯಕ್ಷಗಾನ, ತಾಳಿ ಮದ್ದಾಳೆ, ಚಂಡೆ ವಾದ್ಯ, ನಾಟಕ ,ನೃತ್ಯ, ಕಲೆ ,ಸಂಪತ್ತು, ಸಂಸ್ಕೃತಿಗಳ ರಕ್ಷಣೆಗಾಗಿ ಸಮೂಹ ಸಂಸ್ಥೆಯನ್ನು ಸ್ಥಾಪಿಸಿ ,ಪೋಷಿಸಿ ,ಬೆಳೆಸಿ, ಬೃಹತ್ ವನರಂಗ ವನ್ನು ನಿರ್ಮಿಸಿ "ರಂಗ ಶಿವ" ತಂಡವನ್ನು ಕಟ್ಟಿ ಅಬಾಲ ವೃದ್ಧರಿಗೆ ಬಣ್ಣದ ಬೆಳಕನ್ನು ತೋರಿಸಿ ,ಹೆಗಡೆ ಕುಟುಂಬದ ಸಾಹಿತ್ಯದ ಕುಡಿಯಾಗಿ ,ಎಲ್ಲರಂತೆಯೂ ಸಾಹಿತ್ಯ ಅಭಿಮಾನಿವನ್ನು ಮೂಡಿಸಿ ಓದು ಕಲಿಸಿ ಸ್ವಯಂ ಕವ ಯತ್ರಿ ಯಾಗಿ ನಿರ್ಮಲ ಮನಸ್ಸುಗಳಿಗೆ ಮುದ ನೀಡಿ ತುಳು ಗ್ರಾಮ ನಿರ್ಮಿಸಿ, ತುಳು ಚರಿತ್ರೆಯನ್ನು ನಿರ್ಮಿಸಿದರು.
ಸರ್ವ ರತ್ನ ತಿದ್ದುವ ಸರಸ್ವತಿ ಯಾಗಿ ,ಜ್ಞಾನ ಭಂಡಾರ ವನ್ನು ನಾಡಿ ನಾದ್ಯಂತ ಪಸರಿಸಿ ,ಸಾಮಾನ್ಯರಲ್ಲಿನ ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನವನ್ನು ಹರಡಿ, ಜ್ಞಾನ ವಿಕಾಸದ ಗ್ರಂಥ ಭಂಡಾರ ಗಳನ್ನ ಮಹಿಳೆಯರಿಗೆ ತಿಳುವಳಿಕೆ ಮಟ್ಟಕ್ಕೆ ಕೊಂಡೊಯ್ದು ,ಸಮಾಜದ ಮುಖ್ಯ ವಾಹಿನಿಗೆ ತಂದರು.
ಪೂಜ್ಯ ಮಾತೆಯವರು ದೈವಿಕ ಬದುಕಿನ ಮೂಲಕ ಹೆಗ್ಗಡೆ ಕುಟುಂಬದ ಅಮ್ಮನಾಗಿ, ಶ್ರದ್ಧ ಬಾಲಕಿಯರಿಗೆ ತಾಯಿಯಾಗಿ ,ಮಹಿಳಾ ಸಬಲೀಕರಣದ ಮುಖೇನ ಸರ್ವರಿಗೂ ಮಾರ್ಗದರ್ಶಿಯಾಗಿ, ಪರಿಸರ ಸಂರಕ್ಷಣೆ, ಸ್ವಚ್ಛತೆ ,ಪ್ಲಾಸ್ಟಿಕ್ ರಹಿತ ಜೀವನ ,ಲಕ್ಷ ಕುಟುಂಬಗಳಿಗೆ ಮಾತೃ ಶ್ರೀ ಯಾಗಿ ,ಸಮಾಜದಲ್ಲಿನ ಬದುಕಿಗೆ ಸಂಪೂರ್ಣ ಸಮರ್ಪಿತರಾಗಿ ,ಸಮಾಜದ ನೊಂದವರ ದಾರಿ ದೀಪವಾಗಿ ಆಶಾಕಿರಣರಾದರು.
ಏಳು ದಶಕಗಳ ಸಾರ್ಥಕ ಜೀವನದ ಕುಟುಂಬ ನಿರ್ವಹಣಾ ಧರ್ಮ ,ಮಾನವ ಸಂಪನ್ಮೂಲಗಳ ಅಭಿವೃದ್ಧಿ ಜ್ಞಾನ ವರ್ಧನೆ ,"ಗೆಳತಿ " ಅಂಕಣ ನಿರಂತರ ಮಾಸಿಕದಲ್ಲಿ ಹಲವಾರು ಲೇಖನಗಳ ಮೂಲಕ ಸಮಾಜದ ಜಾಗೃತಿಗೆ ಮುನ್ನುಡಿ ಬರೆದಿದ್ದಾರೆ.
ಇವರ ಅನುಪಮ ಸೇವೆಯನ್ನು ಗುರುತಿಸಿ ಕಮಲ ಗೋಯಾಕ ಪ್ರತಿಷ್ಠಾನ ಕೊಡ ಮಾಡುವ. 2014. ರ ಗೋಯಾಂಕ ಕನ್ನಡ ಸಾಹಿತ್ಯ ಸಮ್ಮಾನವನ್ನು ಸಮಾಜ ಸೇವೆಗಾಗಿ ಹೇಮಾವತಿ .ವೀ. ಹೆಗಡೆ ಇವರಿಗೆ "ದಕ್ಷಿಣ ಧ್ವಜದಾರಿ ಸಮ್ಮಾನ್ ಪುರಸ್ಕಾರ" ನೀಡಿ ಗೌರವಿಸಿದೆ.
2023ರ ಜನವರಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ. " ಗೌರವ ಡಾಕ್ಟರೇಟ್ ". ನೀಡಿ ಗೌರವಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖವಾಣಿಯಾದ" ಮಂಜು ವಾಣಿ" ಮಾಸಿಕದಲ್ಲಿ ಮಗಳಿಗೊಂದು ಪತ್ರ ಸಮಾಜದ ಮಹಿಳೆಯರನ್ನ ಜಾಗೃತಿ ಗೊಳಿಸುವಂತಹ ಅಂಕಣವಾಗಿದೆ . ಮಹಿಳೆಯರ ನಿತ್ಯ ಜೀವನದ ಬದುಕಿನ ಬದುಕನ್ನು ಹಸನಾಗಿಸಲು ಹಲವಾರು ಕಾರ್ಯಕ್ರಮಗಳನ್ನ ರೂಪಿಸಿ ಧರ್ಮಸ್ಥಳ ಶ್ರೀಮಂಜುನಾಥ , ಶ್ರೀ ಅಣ್ಣಪ್ಪ ಸ್ವಾಮಿ , ಶ್ರೀಬಾಹುಬಲಿ ಶ್ರೀ,ಚಂದ್ರನಾಥ ತೀರ್ಥಂಕರರು ,ಪೂಜೆ ಹೆಗ್ಗಡೆಯವರ ಆಶೀರ್ವಾದ ಪ್ರೋತ್ಸಾಹದಿಂದ ,ಗ್ರಾಮೀಣಾಭಿವೃದ್ಧಿ ಯೋಜನೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾದ್ಧ್ಯಕ್ಷರು, ಅವಿಶ್ರಾಂತ ,ಅನುಪಮ ಸೇವೆ ಸಲ್ಲಿಸುತ್ತಿರುವ ಮಾತೆಯವರನ್ನ ಸದಾ ಸ್ಮರಿಸೋಣ, ಒಟ್ಟಾಗಿ ಬಾಳೋಣ, ಸಮಾಜ ಏಳಿಗೆಗೆ ಶ್ರಮಿಸೋಣ.

ರಾಜ್ಯದ ಚಿರಪರಿಚಿತ ಮಹಿಳೆ, ಜೈನ ಧರ್ಮದ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ " ಚೌಟ ". ಮನತನದ ಮಗಳು ಇವರು .ಅಕ್ಷರ ಸಹ "ಜೈನ ರತ್ನ" ವೇ ಆಗಿದ್ದಾರೆ.
ನಾಡು, ಸಮಾಜ ಮರೆತು ಹೋಗಿದ್ದ ಹಲವಾರು ಪುರಾತನ ಜಾನಪದ ಕಲೆಗಳ ಹಾಗೂ ಗ್ರಾಮೀಣ ಕಲೆಗಳಿಗೆ ಮರು ಹುಟ್ಟು ನೀಡುತ್ತಿರುವ ಮಹಾತಾಯಿ.
ಭರತ ಖಂಡದ ಜೈನ ಸಂಸ್ಕೃತಿಯಲ್ಲಿ " ಜಿನ ಭಜನೆ" ಪುರಾತನ ಸಂಗೀತ ಪದ್ಧತಿಯಾಗಿದ್ದು, ಭಾರತೀಯ ಜೈನ ಸಂಸ್ಕೃತಿಯ ಮೂಲಕ ದೇಶ -ವಿದೇಶಗಳಲ್ಲಿ ಜಿನ ಭಜನೆಯ ಕಹಳೆ ಮೊಳಗಿಸಿದ್ದಾರೆ.
ಇದು ಜೈನ ಧರ್ಮದ ಧಾರ್ಮಿಕ ,ಸಾಂಸ್ಕೃತಿಕ ,ಸಂಸ್ಕಾರದ ಉತ್ಸವ ವಾಗಿದ್ದು ಅನಿತಾ ಸುರೇಂದ್ರ ಕುಮಾರ್ ತ್ಯಾಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ರಾಜ್ಯದಾದ್ಯಂತ ಮುನಿಸೇವೆಯಲ್ಲಿ ಅಗ್ರಗಣ್ಯರು .ಸದಾ ನಗುಮುಖದ ಇವರು ,ಅನೇಕ ಸಭೆ -ಸಮಾರಂಭಗಳಲ್ಲಿ ಭಾಗವಹಿಸಿ ಜೈನ್ ಮಿಲನ ಗಳ ಸಂಘಟನೆಗೆ ಶ್ರಮಿಸಿದ್ದಾರೆ.