ಆದಿನಾಥ ಮಹಿಳಾ ಸಮಾಜ, ಹುಬ್ಬಳ್ಳಿ

ಸಮಾಜದ ಕಾರ್ಯಕಾರಿ ಮಂಡಳಿ:

ಅಧ್ಯಕ್ಷರು : ಶ್ರೀಮತಿ ಭಾರತಿ ಬಿ.ಹಿರೇಗೌಡರ

ಗೌರವ ಅಧ್ಯಕ್ಷರು : ಆಶಾ.ಎಸ್.ಬಾಗಿ, ತ್ರಿಶಲಾ.ಬಿ.ಮಾಲಗತ್ತಿ. ಶೋಭಾ ರತ್ನಪಾಲ ಶೆಟ್ಟಿ

ಉಪಾಧ್ಯಕ್ಷರು : ಸುಜಾತಾ.ಅ.ಕಲಘಟಗಿ, ಜಯಶ್ರೀ ಹೋತಪೇಟೆ, ಸುನಂದ ಜವಳಿ, ಪದ್ಮಾವತಿ ಟೀಕಣ್ಣವರ, ಸುಮಿತ್ರಾ ಉಮಚಗಿ

ಖಜಾಂಚಿ : ಆರತಿ ಹಿರೇಗೌಡರ

ಕಾರ್ಯದಶಿ : ಚಂದನ ಜವಳಿ

ಸಮಾಜದಿಂದ ಪ್ರತಿವರ್ಷದಲ್ಲಿ ನಡೆಯುವ ಕಾರ್ಯಕ್ರಮಗಳು : -

ಪ್ರತಿವರ್ಷ ಅನಂತ ನೋಂಪಿ ಆಚರಿಸಿ, ನೋಂಪಿ ಮಾಡಿದವರಿಗೆ ಊಟದ ವ್ಯವಸ್ಥೆ, ಎಲ್ಲರಿಗೂ ಬಾಗೀನ ಕೊಡುವುದು, ನವರಾತ್ರಿಯಲ್ಲಿ ದೇವಿಗೆ ಅಲಂಕಾರ, ಕುಂಕುಮಾರ್ಚನೆ, ಪ್ರಸಾದ, ಕಾರ್ತಿಕ ದೀಪೋತ್ಸವ ಮತ್ತು ದೀಪಾಲಂಕಾರ ಸ್ಪರ್ಧೆ, ಮುನಿಗಳ ಆಹಾರ-ವಿಹಾರದಲ್ಲಿ ಭಾಗಿಯಾಗುವುದು, ಮಹಿಳಾ ದಿನಾಚರಣೆಯ ಅಂಗವಾಗಿ ಜೈನ ವೀರ ಮಹಿಳೆಯರ ವೇಷ ಭೂಷಣ ಸ್ಪರ್ಧೆ, ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ನಡೆಯುವ ಚಿಣ್ಣರ ಸ್ಪರ್ಧೆಯಲ್ಲಿ ಪ್ರತಿ ಬಾರಿ ಪ್ರಥಮ ಬಹುಮಾನ, ಹುಬ್ಬಳ್ಳಿ ಮಹಾನಗರದ ಸಬ್ ಜೈಲಿನಲ್ಲಿ ದೀಪಾವಳಿಯ ಪ್ರತಿಪದದ ದಿವಸ ನಮ್ಮೂರಿನವರೇ ಆದ ಆಚಾರ್ಯ ಶ್ರೀ ಕುಂತುಸಾಗರ ಮುನಿಗಳ ಜನ್ಮ ಜಯಂತಿಯನ್ನು ಮಾಡುತ್ತೇವೆ. ಆ ದಿವಸ ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ವಿಶೇಷವೇನೆಂದರೆ ಶ್ರೀ ಕುಂತುಸಾಗರ ಮಹಾರಾಜರ ಹೆಸರಿನಿಂದ ಪಾಠಶಾಲೆಯನ್ನು ಪ್ರಾರಂಭ ಮಾಡಿದ್ದೇವೆ. ಸುಮಾರು ನೂರು ಮಕ್ಕಳು ಪಾಠಶಾಲೆಯಲ್ಲಿ ಕಲಿಯುತ್ತಾ ಇದ್ದಾರೆ. ಪ್ರತಿ ವರ್ಷವೂ ಚಾತುರ್ಮಾಸದಲ್ಲಿ ತ್ಯಾಗಿಗಳು ಬರುತ್ತಾರೆ. ಆಚಾರ್ಯ ಶ್ರೀ ಸುಬಲಸಾಗರ ಮುನಿಗಳು, ಶ್ರೀ ಗುಣಧರನಂದಿ ಮಹಾರಾಜರು, ಶ್ರೀ ಜ್ಞಾನೇಶ್ವರ ಮುನಿಗಳು, ವಿಮಲೇಶ್ವರ ಮುನಿಗಳು, ಸಮುದ್ರಸೇನಾಮುನಿಗಳು, ನಿರ್ಮಲ ಮತಿ ಮಾತಾಜಿ, ಧರ್ಮಮತಿ ಮಾತಾಜಿ ಹೀಗೆ ಚಾತುರ್ಮಾಸಗಳು ನಡೆದಿವೆ. ನಿರಂತರ ಆಹಾರ ದಾನ ವ್ಯವಸ್ಥೆ ಮಾಡುತ್ತೇವೆ. ನೆರೆ ಬಂದಾಗ ಪಕ್ಕದ ಊರಿನಿಂದ ಬಂದವರಿಗೆ ವಸತಿ, ಬಟ್ಟೆ-ಬರೆ, ಊಟದ ವ್ಯವಸ್ಥೆಯನ್ನು ಮಾಡುತ್ತೇವೆ. ಇನ್ನು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟಕ್ಕೆ ಸುಮಾರು ೬೦ಕ್ಕೂ ಹೆಚ್ಚು ಮಹಿಳೆಯರು ಸದಸ್ಯರಾಗಿದ್ದೇವೆ. ಹುಬ್ಬಳ್ಳಿಯ ನಳಿನಿ ಜವಳಿಯವರು ಅಧ್ಯಕ್ಷರಿದ್ದಾಗ, ಹಾಸನದ ಕೇಸರಿ ಅವರು ಅಧ್ಯಕ್ಷರಿದ್ದಾಗ ಎರಡು ಸಲ ಒಕ್ಕೂಟದ ಕಾರ್ಯಕಾರಿಣಿ ಸಭೆಯನ್ನು ಮಾಡಿದ್ದೆವು. ತದನಂತರದ ಒಕ್ಕೂಟಕ್ಕೆ ಪುಷ್ಟ ಪಾಟೀಲರು ಉಪಾಧ್ಯಕ್ಷರಾಗಿ ಆಯ್ಕೆಯಾದರು. 2017ರಲ್ಲಿ ನಡೆದ ಮಸ್ತಕಾಭಿಷೇಕದಲ್ಲಿ ರಾಷ್ಟೀಯ ಮಹಿಳಾ ಸಮ್ಮೇಳನದಲ್ಲಿ ಪುಷ್ಪ ಪಾಟೀಲರಿಗೆ ಆದರ್ಶ ಜೈನ ಮಹಿಳೆ ಪ್ರಶಸ್ತಿ ಬಂದಿದೆ. ಹಾಗೂ ಹೇಮಾವತಿ ಹೆಗ್ಗಡೆಯವರಿಂದ 

ಚಿನ್ನದ ಪದಕ ಬಂದಿದ್ದು ಹೆಮ್ಮೆಯ ವಿಷಯ. ನಮ್ಮ ಮಹಿಳಾ ಸದಸ್ಯರು ಮೆರವಣಿಗೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನವರಾತ್ರಿಯಲ್ಲಿ ಸಿದ್ಧಿ ಗ್ರೂಪ್ ಪದ್ಮಾವತಿ ಅಮ್ಮನವರ ಸಹಕಾರದೊಂದಿಗೆ ಕಾರ್ಯಕ್ರಮ ಮಾಡುತ್ತೇವೆ. ಇದೇ ನಮ್ಮ ಮಹಿಳಾ ಸಮಾಜದ ವಿಶೇಷ. 

ಅದೇ ರೀತಿ ಪ್ರತಿ ವರ್ಷ ಚಾತುರ್ಮಾಸವನ್ನು ಸಹ ಆಚರಿಸುತ್ತೇವೆ. ನವರಾತ್ರಿಯಲ್ಲಿ ೯ ದಿನ ಪದ್ಮಾವತಿ ಅಮ್ಮನವರಿಗೆ ೯ ರೀತಿಯ ಅಲಂಕಾರವನ್ನು ಹಾಗೂ ಭಜನೆ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸುತ್ತೇವೆ ಹಾಗೂ ಶ್ರಾವಕಿಯರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಧರ್ಮದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಿವನಗದ್ದೆ, ಸೋಂದಾ ಮಠ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿ ಧರ್ಮದ ಅರಿವನ್ನು ಅರಿತುಕೊಳ್ಳುತ್ತಾರೆ. 

ಅಧ್ಯಕ್ಷರು : ಶ್ರೀಮತಿ ನಳಿನಿ ವಿಲಾಸ ಕಳಸೂರ, ಫೋ.ನಂ. 9380964854

ಕಾರ್ಯದರ್ಶಿ : ಶ್ರೀಮತಿ ಸರೋಜಾ ಜಿ ವರೂರ, ಫೋ.ನಂ. 9945780477

ಸಭೆಗೆ ಬರುವ 5 ಜನರು : 1) ಸರೋಜಾ ವರೂರ  2) ಸುಮಾ  3) ಚಂಪಾವತಿ 4) ದೇವಕಿ  5) ಪದ್ಮಾವತಿ ದೇವಲಾಪುರ

 

ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ – 8861088166

 

Sl No. ID No. Name Designation Contact Number Photo