Members
ಜೈ ಜಿನವಾಣಿ ಮಹಿಳಾ ಮಂಡಲ, ಯಮಕನ ಮರಡಿ
ದಿನಾಂಕ: 26/08/2015 ಅವಧಿಯಲ್ಲಿ ನಮ್ಮ ಯಮಕನಮರಡಿ ಗ್ರಾಮದಲ್ಲಿ ಜೈ ಜಿನವಾಣಿ ಮಹಿಳಾ ಮಂಡಳ ಎಂಬ ಹೆಸರಿನ್ಲಲಿ ಮಹಿಳಾಮಂಡಲ ಪ್ರಾರಂಭವಾಯಿತು. ೯ವರ್ಷಗಳಿಂದ ಸಾಧನಾ ಶಾಂತಿನಾಥ ಪಾಟೀಲ ಎಂಬವರು ಘನ ಅಧ್ಯಕ್ಷತೆಯನ್ನು ವಹಿಸಿಕೊಂಡರು. ದೀಪ ಪ್ರಜ್ವಲನೆಯೊಂದಿಗೆ ಲೋಕಾರ್ಪಣೆ ಮಾಡಲಾಯಿತು. ಪದ್ಮಾವತಿ ಅಜಿತ್ ಸಮಯ ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸುರೇಖಾ ಮಹಾವೀರ ಬಿಲ್ಲನವರ ಇವರನ್ನು ಕಾರ್ಯದರ್ಶಿಯಾಗಿ ಮಾಡಲಾಯಿತು. ಎಲ್ಲಾ ಮಹಿಳೆಯರು ಸೇರಿ ಧರ್ಮ ಜಾಗೃತಿ ಮೂಡಿಸಿದೆವು. ನಾವೆಲ್ಲರೂ ಕೂಡಿ ಒಂಭತ್ತು ವರ್ಷ ದೀಪೋತ್ಸವವನ್ನು ಅತಿ ವಿಜೃಂಭಣೆಯಿಂದ ಮಾಡುತ್ತಾ ಬಂದಿರುತ್ತೇವೆ, ಹಾಗೆ ರಕ್ಷಾಬಂಧನ ನಿಮಿತ್ಯ ರಂಗೋಲಿ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿದ್ದೇವೆ. ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದ್ದೇವೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂದ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ್ದೇವೆ. ಮಹಾವೀರ ಜಯಂತಿ ನಿಮಿತ್ಯ ರೋಗಿಗಳಿಗೆ ಹಣ್ಣು ಮತ್ತು ಹಾಲು ವಿತರಣೆ ಮಾಡಿದ್ದೇವೆ ಹಾಗೂ ಮಹಾವೀರ ಜಯಂತಿ ನಿಮಿತ್ಯ ತಾಲ್ಲೂಕು ಮಟ್ಟದಲ್ಲಿ ಶ್ರೀ ಶಾಂತಿಸಾಗರ ಮಹಾರಾಜರ ಚರಿತ್ರೆ ಎಂಬ ಕಿರು ಚಿತ್ರದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದೇವೆ. ಸಮ್ಮೇದ ಶಿಖರ್ಜಿ ಬಚಾವೋ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಎಲ್ಲಾ ಮಹಿಳೆಯರು ಸೇರಿ ಮುನಿ ಮಹಾರಾಜರಿಗೆ ಆಹಾರದಾನ ಮತ್ತು ವೈಯಾವೃತ್ತಿ ಮಾಡುತ್ತಾ ರಸ್ತೆಯಲ್ಲಿ ಮಹಾರಾಜರು ಹೊರಟರೆ ಅವರಿಗೆ ಆಹಾರ ಮಾಡಲು ಬೇರೆ ಕಡೆಗೆ ಹೋಗಿ ಆಹಾರಚರ್ಯ ಮಾಡುತ್ತೇವೆ. ನವೆಲ್ಲರೂ ಶ್ರಾವಕ ಶ್ರಾವಕಿಯರು ಕೂಡ ಶನಿ ಗ್ರಹ ಅರಿಷ್ಟ ನಿವಾರಕ ವಿಧಾನ, ನಮೋಕಾರ ಮಹಾಮಂತ್ರ, ಆರಾಧನಾ ವಿಧಾನ, ಕಲ್ಯಾಣ ಮಂದಿರ ವಿಧಾನ, ಹಾಗೂ ಸೂತಕ ವೃದ್ಧಿ ನಿವಾರಕ ವಿಧಾನ ಎಲ್ಲಾ ಮಹಿಳೆಯರು ಬೆಳಗಿದೆವು. ನಾವು ಎಲ್ಲಾ ಶ್ರಾವಕಿಯರನ್ನು ಕರೆದು ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮನೋರಂಜನೆ ಕಾರ್ಯಕ್ರಮ, ಮಕ್ಕಳ ಜಾನಪದ ನೃತ್ಯ, ನಮೋಕಾರ ಮಂತ್ರದ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ.
ಶ್ರೀ ಸಿದ್ಧಸೇನ ಮಹಾರಾಜರ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದೇವೆ. ಶ್ರೀ ಬಾಹುಬಲಿ ಸಾಗರ ಮಹಾರಾಜರ ಅರ್ಘ್ಯದಲ್ಲಿ ನಾವು ದೀಪ ಬೆಳಗುವುದಕ್ಕೆ ಭಾಗವಹಿಸಿದೆವು. ಬೆನಿವಾಡ ಪಂಚ ಕಲ್ಯಾಣ ಪೂಜೆ ಯರನಾಳ ಪಂಚ ಕಲ್ಯಾಣ ಪೂಜೆ ಮತ್ತು ಆನಂದಪುರ ಪಂಚ ಕಲ್ಯಾಣ ಪೂಜೆಯಲ್ಲಿ ಭಾಗವಹಿಸಿದ್ದೇವೆ. ಮಕ್ಕಳಿಗೆ ಮತ್ತು ಶ್ರಾವಕಿಯರಿಗೆ ಜೈನ ಧರ್ಮದ ಸಂಸ್ಕಾರ ಶಿಬಿರವನ್ನು ಏರ್ಪಡಿಸಬೇಕೆಂದು ಚರ್ಚೆ ಮಾಡುತ್ತಿದ್ದೇವೆ. ಮಹಾವೀರ ಜಯಂತಿ ನಿಮಿತ್ಯ ಎಲ್ಲಾ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ದೇವೆ. ಈ ರೀತಿಯಾಗಿ ನಮ್ಮ ಮಹಿಳಾ ಮಂಡಲವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ.
ಶ್ರೀ ಜಯಶಾಮಾದೇವಿ ಜೈನ ಮಹಿಳಾ ಸಮಾಜ,
ಚಾಮರಾಜನಗರ.
ಚಾಮರಾಜನಗರದಲ್ಲಿ 1999ನೇ ಅಕ್ಟೋಬರ್ 31ನೇ ದಿನಾಂಕದಂದು ಶ್ರೀ ಜಯಶಾಮದೇವಿ ಜೈನ ಮಹಿಳಾ ಸಮಾಜವು ಶ್ರೀಮತಿ ಧರ್ಮಾಂಭ ನಾಗೇಂದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಶ್ರೀ ಕ್ಷೇತ್ರ ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿನವರು ಆಶೀರ್ವದಿಸಿ ಇದರ ಉದ್ಘಾಟನೆಯನ್ನು ಮಾಡಿದರು.
ಚಾಮರಾಜನಗರದ ಎಲ್ಲಾ ಶ್ರಾವಕಿಯರು ಇದರ ಸದಸ್ಯರು. ನಮ್ಮ ಸಮಾಜದ ಸ್ಥಾಪನೆಗೆ ಮುಖ್ಯ ಕಾರಣರೆಂದರೆ ಶ್ರೀಮತಿ ಲಲಿತಮ್ಮನವರು ಅಂದಿನಿಂದ ನಿರಂತರವಾಗಿ ನಮ್ಮ ಸಮಾಜವು ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಮುಂದೆ ನಡೆಯುತ್ತಾ ಬಂದಿದೆ.
2019ರಂದು ಈ ನಮ್ಮ ಸಮಾಜಕ್ಕೆ ನೂತನ ಅಧ್ಯಕ್ಷರಾಗಿ ರ್ಶರೀಮತಿ ಪದ್ಮಶ್ರೀ ಬ್ರಹ್ಮೇಶ್ಕುಮಾರ್ರವರು ಆಯ್ಕೆಯಾದರೂ ಅವರು ಸಹ ಅನೇಕ ಧರ್ಮ ಕಾರ್ಯಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯಕರ್ತಗೊಳಿಸಿದ್ದಾರೆ.
ನಮ್ಮ ಮಹಿಳಾ ಸಮಾಜದವರು ಶ್ರೀ 1008 ವಿಜಯ ಪಾರ್ಶ್ವನಾಥಸ್ವಾಮಿಯ ಬಸದಿಗೆ ಮಾನಸ್ತಂಬದ ನಿರ್ಮಾಣವನ್ನು ಮಾಡಿಸಿದರು ಹಾಗೂ ಮುನಿಗಳಿಗೆ ಆಹಾರ ತಯಾರು ಮಾಡುವ ಅಡುಗೆ ಮನೆಯನ್ನು ಸಹ ನಿರ್ಮಾಣ ಮಾಡಿಸಿದರು. ಶ್ರೀ ಕ್ಷೇತ್ರ ಕನಕಗಿರಿಯ ಅತಿಶಯ ಮಹೋತ್ಸವದಲ್ಲಿ ಸ್ವಾಮೀಜಿಯವರ ಅಪ್ಪಣೆಯ ಮೇರೆಗೆ ಆರಾಧನಾ ಹಾಗೂ ಪೂಜೆಯ ಉಸ್ತುವಾರಿಯನ್ನು ಸಹ ನಿಭಾಯಿಸಿದ್ದೇವೆ.
ನಮ್ಮ ಮಹಿಳಾ ಸಮಾಜದ ಕಾರ್ಯಚಟುವಟಿಕೆಗಳು ಈ ರೀತಿಯಾಗಿದೆ, ಪ್ರತಿ ಪರ್ವದಲ್ಲೂ ಬಸದಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಮಹಾವೀರ ಜಯಂತಿ : ಈ ಪರ್ವದಲ್ಲಿ ನಮ್ಮ ಸಮಾಜದಿಂದ ಅನೇಕ ಚಟುವಟಿಕೆಗಳು ಇರುತ್ತವೆ. ಬೆಳಗ್ಗೆ ಎಲ್ಲಾ ಪೂಜಾಕಾರ್ಯಗಳು ಮುಗಿದ ಮೇಲೆ ಮಧ್ಯಾಹ್ನ ಮಹಾವೀರಸ್ವಾಮಿಯ ಬಾಲಲೀಲಾ ಮಹೋತ್ಸವ ಇರುತ್ತದೆ. ನಂತರ ನವಜಾತ ಶಿಶುಗಳಿಗೆ ಬಟ್ಟೆ ಹಂಚುವ ಕಾರ್ಯಕ್ರಮ ಇರುತ್ತದೆ.
ಅಕ್ಷಯ ತದಿಗೆ : ಈ ಪರ್ವದಲ್ಲಿ ಬೆಳಿಗ್ಗೆ ಅಷ್ಟ ವಿಧಾರ್ಚನೆ ಇರುತ್ತದೆ. ನಂತರ ಆದಿನಾಥ ತೀರ್ಥಂಕರರಿಗೆ ಆಹಾರದಾನದ ಕಾರ್ಯಕ್ರಮ ಇರುತ್ತದೆ.
ಅಷ್ಟಾನಿಕಪರ್ವ: ಈ ಪರ್ವದಲ್ಲಿ ಎಂಟು ದಿನವೂ ನಿತ್ಯ ವಿಶೇಷ ಪೂಜೆ ಮತ್ತು ಅಷ್ಟ ವಿಧಾರ್ಚನೆ ಇರುತ್ತದೆ.
ಮುಕುಟ ಸಪ್ತಮಿ : ಈ ಪರ್ವದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ನಿರ್ವಾಣ ಲಾಡು ಸಮರ್ಪಣೆ ಇರುತ್ತದೆ.
ಗೌರಿ ಹಬ್ಬ : ಈ ಪರ್ವದಲ್ಲಿ ಎಲ್ಲಾ ಮಹಿಳೆಯರು ಸಾಮೂಹಿಕವಾಗಿ ಅಷ್ಟವಿದಾರ್ಚನೆ ಮಾಡುತ್ತೇವೆ.
ಅನಂತ ನೋಂಪಿ : ಈ ಪರ್ವದಲ್ಲಿ 3 ದಿನವೂ ನೋಂಪಿ ನಡೆಯುತ್ತದೆ ಮತ್ತು ವೃತ್ತಿಕರಿಗೆ ಮಡಿಯಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡುತ್ತೇವೆ.
ನವರಾತ್ರಿ : ಈ ಪರ್ವದಲ್ಲಿ 10 ದಿನವೂ ರಾತ್ರಿ ಅಮ್ಮನವರಿಗೆ ಉಯ್ಯಾಲೆ ಸೇವೆ ಇರುತ್ತದೆ.
ದೀಪಾವಳಿ : ಈ ಪರ್ವದಲ್ಲಿ ಬೆಳಿಗ್ಗೆ ಅಷ್ಟವಿದಾರ್ಚನೆ ಮತ್ತು ಮಹಾವಿರ ಸ್ವಾಮಿಗೆ ನಿರ್ವಾಣ ಲಾಡು ಅರ್ಪಿಸುತ್ತೇವೆ.
ದೀಪೋತ್ಸವ : ಈ ದಿನ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಶೋಢಶೋಪಚಾರ ಪೂಜೆ, ಕುಂಕುಮಾರ್ಚನೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳು ಏರ್ಪಡಿಸುತ್ತೇವೆ. ಬಸದಿಯನ್ನು ದೀಪಗಳಿಮದ ಅಲಂಕರಿಸಿರುತ್ತೇವೆ.
ಜಿನರಾತ್ರಿ : ಬೆಳಿಗ್ಗೆ ಅಷ್ಟವಿದಾರ್ಚನೆ ಇರುತ್ತದೆ.
ಈ ರೀತಿ ಪ್ರತಿ ಪರ್ವದಲ್ಲೂ ನಮ್ಮ ಮಹಿಳಾ ಸಮಾಜವು ಸೇವೆ ಮಾಡುತ್ತಾ ಬಂದಿದೆ.
ಪದ್ಮಕಲಾ ಪ್ರಸಾದ್, ಕಾರ್ಯದರ್ಶಿಗಳು
ಮೊ:9591713467
ಪದ್ಮಶ್ರೀ ಬ್ರಹ್ಮೇಶ್ಕುಮಾರ್, ಅಧ್ಯಕ್ಷರು,
ಮೊ: 998056569
ಜೈಜಿನವಾಣಿ ಮಹಿಳಾ ಮಂಡಲ ಯಮಕನಮರಡಿ - 9901483327
Sl No. | ID No. | Name | Designation | Contact Number | Photo |
---|---|---|---|---|---|
1 | AKJMO-0201 | ಸಾಧನಾ ಪಾಟೀಲ | ಅಧ್ಯಕ್ಷರು | 99014 83327 |