ಜ್ವಾಲಾ ಮಾಲಿನಿ ಮಹಿಳಾ ಸಮಾಜ, ಚನ್ನರಾಯಪಟ್ಟಣ

ನಮ್ಮ ಸಮಾಜವು 06/04/2004ರಲ್ಲಿ ಸ್ಥಾಪನೆಗೊಂಡು ನೋಂದಣಿಯಾಗಿರುವುದಿಲ್ಲ.

ಸಮಾಜದ ಸಂಸ್ಥಾಪಕರ ಹೆಸರು : ಯಶೋಧ ಜೈನ್ ನಾಗರಾಜು, ಮಮತಾ ಪದ್ಮರಾಜ್, ಲೀಲಾವತಿ ಧನಂಜಯ್ ಕುಮಾರ್, ಪದ್ಮಿನಿ ಬ್ರಮೇಶ್ ಬಾಬು, ಸುಜಯಾ ಭಾನುಕುಮಾರ್.

ನಮ್ಮ ಸಮಾಜವು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬಡವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಶ್ರಮಿಸುತ್ತಾ ಸಮಾಜಕ್ಕೆ ಮಾದರಿಯಾಗಿದೆ. ಇವರು ದೇಶ ಭಕ್ತಿ ಮತ್ತು ಕರ್ತವ್ಯ ನಿಷ್ಠೆಯಿಂದ ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯ ವಿವಾಹ, ಜಾತಿ ಪದ್ಧತಿ, ಬಾಲಕಾರ್ಮಿಕರ ಶೋಷಣೆಯ ವಿರುದ್ಧ ಹೋರಾಟ, ಉಚಿತ ವೈದ್ಯಕೀಯ ರಕ್ತದಾನ, ನೇತ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಿ ತಾಲೂಕು ಮಟ್ಟದಲ್ಲಿ ಕಾನೂನು ಕಮ್ಮಟ ಕಾರ್ಯಕ್ರಮ, ಸಾಕ್ಷರತಾ ಆಂದೋಲನ, ಪರಿಸರ ಸಂರಕ್ಷಣಾ ಕಾರ್ಯಕ್ರಮ, ಸ್ವಚ್ಛತೆ, ಪಲ್ಸ್ ಪೋಲಿಯೋ, ಮದ್ಯವರ್ಜನ ಶಿಬಿರ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅನೇಕ ಸಂಘಗಳನ್ನು ಸಂಘಟಿಸಿ ಸಮಾಜ ಸೇವೆ ಮಾಡಲು ಸ್ಫೂರ್ತಿ ತುಂಬಿರುತ್ತೇವೆ. ಸರ್ಕಾರದ ಸವಲತ್ತು ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇಪ್ಪತ್ತು ವರ್ಷಗಳಿಂದ ಬಡವರ, ಅಂಗವಿಕಲರ ಸೇವೆಯನ್ನೂ ಕೂಡಾ ಸಲ್ಲಿಸಿರುತ್ತೇವೆ. ಕನ್ನಡ ನಾಡಿನ ಸಂಸ್ಕೃತಿ ನಾಡುನುಡಿ, ಸಾಹಿತ್ಯ ಉಳಿಸುವಲ್ಲಿ  “ಚನ್ನರಾಯಪಟ್ಟಣದ ಸುಮದರಿ” (ಭಾರತೀಯ ನಾರಿ) ಎಂಬ ವಿನೂತನ ಕಾರ್ಯಕ್ರಮ ನಡೆಸಿಕೊಡಲಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್, ಬಡವರಿಗೆ ಆರೋಗ್ಯ ವಿಧವಾವೇತನ, ಅಂಗವಿಕಲರ ವೇತನ, ಮಾಂಗಲ್ಯ ಭಾಗ್ಯ, ಶಾದಿ ಭಾಗ್ಯ ಮತ್ತು ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ಕೊಡಿಸಿದ್ದೇವೆ. ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ.

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಡೆದ ಮಹಿಳಾ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ಥಬ್ಧ ಚಿತ್ರದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಹಾಗೂ ಬ್ಯಾನರ್ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಬಂದಿರುತ್ತದೆ. ಹಾಗೂ 16/02/2018ರಲ್ಲಿ ಭಗವಾನ್ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ತಬ್ಧ ಚಿತ್ರದಲ್ಲಿ 24 ತೀರ್ಥಂಕರರ ಯಕ್ಷ ಯಕ್ಷಿಯರ ಹಾಗೂ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜನ್ಮಕಲ್ಯಾಣ ಯೋಜನೆಗಳ 

ಬಗ್ಗೆ 7 ತೆರೆದ ವಾಹನಗಳಲ್ಲಿ ಸ್ಥಬ್ಧ ಚಿತ್ರಗಳ ಪಾತ್ರಗಳು ಮನೋಜ್ಞವಾಗಿ ಮೂಡಿ ಬಂದಿವೆ. ಸಾರ್ವಜನಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 

ಮಾತೃವಂದನಾ ಕಾರ್ಯಕ್ರಮದ ಉಪಸಮಿತಿ ಸದಸ್ಯರಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದೇವೆ. ಹಾಗೂ ಗಣನೀಯ ಆರ್ಯಿಕಾ ಶ್ರೀ 105 ವೀತಾಶ್ರೀ ಮಾತಾಜಿಯವರ 25ನೇ ದೀಕ್ಷಾ ರಜತ ಮಹೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಿದ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಿರುತ್ತಾರೆ. ಹಾಗೂ ಮುನಿಗಳಿಗೆ ಆಹಾರದಾನ, ನೋಂಪಿ ಚಾತುರ್ಮಾಸದ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತೇವೆ. ಹಾಗೂ ಜೈನಧರ್ಮದ ಗ್ರಂಥಾಲಯ ವ್ಯವಸ್ಥೆ ಇರುತ್ತದೆ. ಹಾಗೂ ಬೇಸಿಗೆ ಶಿಬಿರಗಳನ್ನು ಮಾಡಿ ಮಕ್ಕಳಿಗೆ ಧರ್ಮಬೋಧನೆ ಮಾಡಿಸಿರುತ್ತೇವೆ.

 

ಜ್ವಾಲಾಮಾಲಿನಿ ಮಹಿಳಾ ಸಮಾಜ ಚನ್ನರಾಯಪಟ್ಟಣ- 9141512990

Sl No. ID No. Name Designation Contact Number Photo
1 AKJMO-0183 ಯಶೋಧಾ ನಾಗರಾಜ್ ಅಧ್ಯಕ್ಷರು 95381 81942
1 AKJMO-0184 ಮಮತಾ ಕಾರ್ಯಾಧ್ಯಕ್ಷರು 97316 85481