ಪಂಚಕೂಟ ಮಹಿಳಾ ಸಮಾಜ, ತುಮರಿ ಒಳಗೆರೆ

ನಮ್ಮ ಒಕ್ಕೂಟವು ಜುಲೈ 2018ರಲ್ಲಿ ಪದ್ಮಲತಾ ಮಂಜಯ್ಯ ಸಂಸ್ಥೆ, ಅಧ್ಯಕ್ಷರು ಹಾಗೂ ಉದಯ ಜಯಂತ ತಾರೋಡಿ ಇವರು ಕಾರ್ಯದರ್ಶಿಯಾಗಿ ಒಟ್ಟು 10 ಜನರನ್ನು ಒಳಗೊಂಡಿದೆ. 

ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾವೀರ ಜಯಂತಿಯಂದು ಮಹಾವೀರಸ್ವಾಮಿಯ ಬಾಲಲೀಲೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತೇವೆ. 

ನಮ್ಮ ಒಕ್ಕೂಟದ ವತಿಯಿಂದ ಪ್ರತಿ ಶುಕ್ರವಾರ ಪದ್ಮಾವತಿ ದೇವಿಯ ಕುಂಕುಮಾರ್ಚನೆಯನ್ನು ಹಮ್ಮಿಕೊಂಡಿದ್ದೆವು. 

ಧರ್ಮಸ್ಥಳದ ಮಹಾಮಸ್ತಕಾಭಿಷೇಕದಲ್ಲಿ ಒಕ್ಕೂಟದ ಮಹಿಳೆಯರನ್ನೊಳಗೊಂಡ ಪಂಚಕೂಟ ಯಕ್ಷ ನೃತ್ಯ ಬಳಗವು ಪಂಚಕಲ್ಯಾಣದಲ್ಲಿ ನಡೆಯುವ ಸಮವಸರಣದ ಯಕ್ಷ ನೃತ್ಯದಲ್ಲಿ 12 ಕಾರ್ಯಕ್ರಮದ ಸೇವೆಯನ್ನು ಕೊಟ್ಟಿರುತ್ತದೆ. 

ನಮ್ಮ ಮಹಿಳಾ ಒಕ್ಕೂಟವು ಹಲವಾರು ಪಂಚಕಲ್ಯಾಣಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 

ಹಲವಾರು ವಸತಿಯಲ್ಲಿ ತ್ಯಾಗಿಗಳ ಸೇವೆಯಲ್ಲಿ ನಮ್ಮ ಒಕ್ಕೂಟದ ಮಹಿಳೆಯರು ಸಕ್ರಿಯವಾಗಿ ಸೇವೆ ಸಲ್ಲಿಸಿರುತ್ತಾರೆ. 

ಒಕ್ಕೂಟದಿಂದ ಕೊರೊನ ಕಾಲದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಗಿತ್ತು. ಒಕ್ಕೂಟದ ಮಹಿಳೆಯಹರು ಸಿರಿಧಾನ್ಯಗಳ ಪುಡಿ, ಕಷಾಯ ಪುಡಿ, ಉಪ್ಪಿನಕಾಯಿ ಮೊದಲಾದವುಗಳ ತಯಾರಿಕೆಯಲ್ಲಿ ತೊಡಗಿರುತ್ತಾರೆ. ಇನ್ನು ಮುಂದೆಯೂ ಇದೇ ರೀತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. 

ಹಾಲಿ ತಾರಾದೇವಿ ರವೀಂದ್ರ ಮುತ್ತಗಿ ಅವರು ಅಧ್ಯಕ್ಷರಾಗಿರುತ್ತಾರೆ. ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಒಕ್ಕೂಟವನ್ನು ಮುನ್ನಡೆಸುತ್ತಿದ್ದಾರೆ. 

 

 ಪಂಚಕೂಟ ಮಹಿಳಾ ಸಮಾಜ ತುಮರಿ ಒಳಗೆರೆ 9482480220

 

Sl No. ID No. Name Designation Contact Number Photo