Members
ರತ್ನತ್ರಯ ಮಹಿಳಾ ಸಮಾಜ, ಅಡಗೂರು
ರತ್ನತ್ರಯ ಜೈನ ಮಹಿಳಾ ಸಮಾಜದ ಪ್ರಾರಂಭ 04-12-1981 ರಲ್ಲಿ ಅಲ್ಲಿಂದ ಇಲ್ಲಿ ತನಕ ನಡೆದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ವಿವರ. ಪುರಾತನವಾದ ಮಹಾವೀರ ತೀರ್ಥಂಕರರ ಬಸದಿ ಜೀರ್ಣಾವ್ಯವಸ್ಥತೆಯಲ್ಲಿದ್ದಿತ್ತು, ಮತ್ತು ಮೂರ್ತಿಯು ಸಹ ಭಿನ್ನವಾಗಿತ್ತು. ಅದನ್ನು 1992 ರಲ್ಲಿ ಜೀರ್ಣೋದ್ಧಾರ ಮಾಡಿ 105 ಮಾಯಸಂದ್ರದ ರಾಜಮತಿ ಮಾತಾಜಿಯವರು ಕೊಟ್ಟಂತ ಅಮೃತಶಿಲೆಯ ಪದ್ಮಾಸನ ಮೂರ್ತಿಯನ್ನು 108 ಶಂಭವ ನಂದಿ ಮುನಿಗಳ ಸಮಕ್ಷಮದಲ್ಲಿ ಪ್ರತಿಷ್ಠಾಪಿಸಲಾಯಿತು. 1993ರಿಂದ ಅಡಗೂರಿನ ಜೈನ ಸಮಾಜದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಮುನಿಶ್ರೀ 108 ಶಂಭದ ನಂದಿ ಮುನಿಗಳ ಚಾತುರ್ಮಾಸ ಅಡಗೂರಿನಲ್ಲಿ ನಡೆಯಿತು. ಆಗ ಜನಗಳಲ್ಲಿ ಜೈನ ಧರ್ಮದ ತಿಳುವಳಿಕೆ ಹೆಚ್ಚಾಗಿ ಜನಗಳು ಧಾರ್ಮಿಕವಂತರಾದರು. 1993ರಿಂದ ಇಲ್ಲಿಯ ತನಕ ಮಹಾವೀರರ ಜನ್ಮ ಕಲ್ಯಾಣವನ್ನು ಬಹಳ ವಿಜೃಂಭಣೆಯಿಂದ ನಾಮಕರಣ, ತೊಟ್ಟಿಲ ಕಾರ್ಯಕ್ರಮ, ಬಾಲ ಲೀಲೋತ್ಸವ ಹೀಗೆ ಆ ದಿವಸಗಳಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಧಾರ್ಮಿಕ ಪ್ರಶ್ನೋತ್ರ ಕಾರ್ಯಕ್ರಮ, ನಾಟಕ ಮುಂತಾದವುಗಳನ್ನು ಮಾಡಿಸಲಾಗುವುದು. ಇನ್ನೂ ವಿಶೇಷ ದಿನಗಳಲ್ಲಿ ಅಂದರೆ ಶ್ರುತ ಪಂಚಮಿ, ಅಕ್ಷಯ ತದಿಗೆ, ಅಷ್ಟಾಹ್ನಿಕ ಪರ್ವ, ತೀರ್ಥಂಕರರ ಮೋಕ್ಷ ಕಲ್ಯಾಣಗಳು, ಅನಂತನೋಂಪಿ ಇಂತಹ ದಿನಗಳಲ್ಲಿ ಸಾಮೂಹಿಕ ಅಷ್ಟ ವಿಧಾರ್ಚನೆ ಮಹಿಳೆಯರಿಂದ ನಡೆಸಿಕೊಂಡು ಬರಲಾಗುತ್ತಿದೆ. ಜೈನರ ಮಹಾಪರ್ವವಾದ ದಶಲಕ್ಷಣಿಕ ಪರ್ವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪೂಜೆಯ ಜೊತೆಗೆ 10 ಜನ ಶಾಸ್ತ್ರಜ್ಞಾನಿಗಳಿಂದ ಪ್ರವಚನವನ್ನು ಏರ್ಪಡಿಸಿ ಜನಗಳಲ್ಲಿ ಧರ್ಮ ಜಾಗೃತಿಯನ್ನು ಹೆಚ್ಚಿಸಲಾಗಿದೆ. 13/5/2007ರಲ್ಲಿ ಸಮಾಜದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಬಹಳ ಅದ್ದೂರಿಯಿಂದ ಮಾಡಲಾಯಿತು. ಆ ಸಂದರ್ಭದಲ್ಲಿ ಸಾಧಕಿಯರಾದ ಕೌಸಲ್ಯ ಧರಣೇಂದ್ರ ಮತ್ತು ಯಶೋಧರ ಅವರನ್ನು ಸನ್ಮಾನಿಸಲಾಯಿತು. ಇನ್ನು ಮುನಿಗಳ ಆಗಮನವಾದಾಗ ಅವರನ್ನು ಸ್ವಾಗತಿಸಿ ಆಹಾರದ ವ್ಯವಸ್ಥೆ ಮತ್ತು ಅವರಿಂದ ಪ್ರವಚನ ಮಾಡಿಸಿ ಮುಂದಿನ ಊರಿಗೆ ತಲುಪಿಸುವ ಕಾರ್ಯಕ್ರಮವನ್ನು ಸಮರ್ಪಕವಾಗಿ ಮಾಡಿಕೊಂಡು ಬರುತ್ತಿದೆ.
ಸುಧಾ ವಿಜಯ ಕಾರ್ಯದರ್ಶಿ
ರತ್ನತ್ರಯ ಮಹಿಳಾ ಸಮಾಜ ಅಡಗೂರು – 8861664330
Sl No. | ID No. | Name | Designation | Contact Number | Photo |
---|