ಶ್ರೀ ಅಪರಾಜಿತ ಮಹಿಳಾ ಸಂಘ, ಮಹಿಷವಾಡಗಿ

ಹೈನುಗಾರಿಕೆಗೆ ಪ್ರಸಿದ್ಧಿಯಾದ ಮಹಿಷವಾಡಗಿಯಲ್ಲಿ ಸನ್ 2018ರಲ್ಲಿ ಅಪರಾಜಿತ ಮಹಿಳಾ ಸಂಘ ಸ್ಥಾಪನೆ ಆಯಿತು. ಸಂಸ್ಥಾಪಕ ಅಧ್ಯಕ್ಷೆಯಾಗಿ ಶ್ರೀಮತಿ ಭಾಗ್ಯಶ್ರೀ ಬಾ ಪಾಟೀಲ ಉಪಾಧ್ಯಕ್ಷೆಯಾಗಿ ಶ್ರೀಮತಿ ಅಭಿನಂದನ ಮಹಿಶಾವಾಡಗಿಯವರು ಆಯ್ಕೆಯಾದರು. ಸಂಘ ಸ್ಥಾಪನೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಶ್ರಾವಕಿಯರು ಮನೆಯಿಂದ ಹೊರಬಂದು ಧಾರ್ಮಿಕ ಕಾರ್ಯಗಳಲ್ಲಿ ತೊಡಗಲಿ, ಮಕ್ಕಳಿಗೆ ಧಾರ್ಮಿಕತೆಯ ಅರಿವು ಮೂಡಿಸುವ ನಿಟ್ಟಿನಿಂದ ಪ್ರಾರಂಭವಾಯಿತು. ಇದರ ಮುಮದಿನ ಪಾಠಶಾಲೆ, ಚಾತುರ್ಮಾಸ, ಅಷ್ಟಾಹ್ನಿಕ, ದಶಲಕ್ಷಣ, ನವರಾತ್ರಿ, ಜನ್ಮಕಲ್ಯಾಣಗಳು, ಮುನಿಚರ್ಯ, ನೋಂಪಿಗಳು ಹೀಗೆ ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದೆ. ಸಂಘವು ಧಾರ್ಮಿಕ ಕಾರ್ಯಕ್ಕೆ ಮಾತ್ರ ಸೀಮಿತವಾಗಿರದೆ, ಮಹಿಳೆಯರಿಗೆ ಹೋಂ ಮಿನಿಸ್ಟರ್ ಕಾರ್ಯಕ್ರಮ, ರಂಗೋಲಿ, ಭಾಷಣ, ನೃತ್ಯದಂತ ಸ್ಪರ್ಧಾ ಕಾರ್ಯಕ್ರಮಗಳಿಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಸಂಘದ ವಿಶೇಷತೆ. 7 ಜನ ಮುನಿಗಳಾದ ಪುಣ್ಯಭೂಮಿ ಮಹೇಶವಾಡಗಿ ಗ್ರಾಮದ  ಮಧ್ಯಭಾಗ ತ್ಯಾಜ್ಯ ವಸ್ತುಗಳಿಂದ ತುಂಬಿತ್ತು, ಇದನ್ನು ಸ್ವಚ್ಛಗೊಳಿಸಿ ಮಹಿಷವಾಡಗಿ ಗ್ರಾಮದ ಪ್ರಥಮ ಮುನಿಗಳಾದ ಸಿದ್ಧ ಸಾಗರ ಮಹಾರಾಜರ ಸ್ಮಾರಕ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಸಂಘದ ಕೊಡುಗೆ ಅಪರಾಜಿತ ಮಹಿಳಾ ಸಮಾಜವು 50ಕ್ಕೂ ಹೆಚ್ಚು ವರ್ಷಗಳಿಂದ ತುಂಬಾ ಚಟುವಟಿಕೆಗಳಿಂದ ಯಾವುದೇ ಬಯೋಮಿತಿಯನ್ನು ತೋರದೆ ಎಲ್ಲ ಸದಸ್ಯರಿಗೆ ಸಹಾಯ, ಸಹಕಾರ, ಸಂತೋಷಗಳನ್ನು ಕೊಡುತ್ತಾ ಬಂದಿದೆ. ಅದೇ ರೀತಿಯಾಗಿ 2023-2024ರ ವರ್ಷ ನಯನ ಗೋಟಡಿಕೆಯವರ ಅಧ್ಯಕ್ಷತೆಯಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರೋಗ್ಯಕರ ಚಟುವಟಿಕೆಗಳನ್ನು ತನು ಮನ ಧನ ಸಹಾಯದಿಮದ ಮಾಡಿದ್ದಾರೆ. ಎಲ್ಲಾ ಮಹಿಳೆಯರಿಗೆ ಅನೇಕ ಅವಕಾಶಗಳನ್ನು ಕೊಡುತ್ತಾ, ಧೈರ್ಯ ಕೊಡುತ್ತಾ ತುಂಬಾ ಸುಂದರವಾಗಿ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಎರಡು ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಎರಡು ಸಲ ವನಮಹೋತ್ಸವ ಎರಡು ಹೆಲ್ತ್-ಚೆಕಪ್ ಕ್ಯಾಂಪ್, ಭಜನಾ ಸ್ಪರ್ಧೆಯಲ್ಲಿ ಸತತ 8 ಬಾರಿ ಭಾಗವಹಿಸಲಾಗಿದೆ. ಧಾರ್ಮಿಕ ಪ್ರವಚನ ದಶಲಕ್ಷಣ ನೋಂಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವುದು, ಅನಂತನೋಂಪಿಯವರಿಗೆ ಮಡಿ ಊಟದ ವ್ಯವಸ್ಥೆ ಪ್ರತಿಯೊಂದು ಹಬ್ಬಗಳಲ್ಲಿ ಅವರದೇ ವಿಶೇಷತೆಗಳನ್ನೊಳಗೊಂಡಂತ ಮಂಡಲವು ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ನಮ್ಮ ಸಮಾಜದ ಮುಖಂಡರ ಸಲಹೆ ಸೂಚನೆಯ ಮೂಲಕ ನಮ್ಮನ್ನು ನಾವು ಧಾರ್ಮಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮುನಿ ಮಹಾರಾಜರು ಬಂದಾಗ ಅವರ ಸೇವೆ ಕಾರ್ಯಕ್ರಮಗಳಲ್ಲಿ ನಮಗೆ ವಹಿಸಿಕೊಟ್ಟ ಕೆಲಸಗಳನ್ನು ಮಾಡುತ್ತೇವೆ. ನಮ್ಮ ಮಂಡಲದಲ್ಲಿ ಪ್ರತಿ ಮಾಸಿಕ ಕಾರ್ಯಕ್ರಮವನ್ನು ಏರ್ಪಡಿಸುತ್ತೇವೆ. ಪ್ರತಿ ತಿಂಗಳು 

ಒಂದೊಂದು ವಿಷಯದ ಮೇಲೆ ಸಲಹೆಯನ್ನು ಕೊಡುತ್ತೇವೆ. ಗಿಡಗಳನ್ನು ನೆಡುವುದು, ಸ್ತ್ರೀರೋಗ ತಜ್ಞರಿಂದ ಸಲಹೆ ಉಚಿತ ಆರೋಗ್ಯ ಶಿಬಿರವನ್ನು ಬಸದಿಗಳಲ್ಲಿ, ನವರಾತ್ರಿಯಲ್ಲಿ ದೇವಿ ಅಲಂಕಾರ ಹಾಗೂ ಉಡಿ ತುಂಬುವ ಕಾರ್ಯಕ್ರಮ, ಸಂಕ್ರಾಂತಿಯಲ್ಲಿ ಅರಿಶಿನ ಕುಂಕುಮ ಮಂಡಳದ ಮಹಿಳೆಯರಿಗಾಗಿ ಇಡುತ್ತೇವೆ. ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬೆಳಗಾವಿಯಲ್ಲಿ ನಮ್ಮ ಮಂಡಳವು ಒಂದು ಒಳ್ಳೆಯ ಹೆಸರನ್ನು ಗಳಿಸಿದೆ. 

 

ಅಧ್ಯಕ್ಷರು

ರೋಮ ಗೋಟಡಕಿ

8884992764

 

ಕಾರ್ಯದರ್ಶಿ

ಆರತಿ ಉಮಚಗಿ

9113578487

 

ಖಜಾಂಚಿ

ಮಾಣಿಕ ಕಲಮನಿ

9449466538

Sl No. ID No. Name Designation Contact Number Photo