ಶ್ರೀ ಕೃಷ್ಣ ಸಮಿತಿ ಅಭಿವೃದ್ಧಿ ಮಹಿಳಾ ಮಂಡಲ, ಸೇಡಬಾಳ

ಪ್ರೀತಿಯೆಂಬ ಐಶ್ವರ್ಯವನ್ನು ಹುಟ್ಟಿನಿಂದಲೇ ಪಡೆದು ಬಂದವರು ಸ್ತ್ರೀಯರು . “ಮಕ್ಕಳಿಗೆ ಜನ್ಮ ಕೊಡುವುದಕ್ಕಿಂತ ಒಳ್ಳೆಯ ಶಿಕ್ಷಣ ಕೊಡುವುದೇ ಮಹತ್ವದ್ದು”. ಮೊದಲನೆಯದು ಜೀವ ಮಾತ್ರ ಕೊಟ್ಟರೆ ಎರಡನೆಯದು ಒಳ್ಳೆಯ ಜೀವನ ಸಾಗಿಸುವ ಕಲೆ ಕೊಡುತ್ತದೆ. ಎಂಬ ಹೇಳಿಕೆಯನ್ನು ತಿಳಿದುಕೊಂಡು ಮಗುವಿನ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಾಯಿಯ ಪಾತ್ರ ಮುಖ್ಯ ಇರುವುದರಿಂದ ನಮ್ಮೂರಿನ ಗಣ್ಯ ವ್ಯಕ್ತಿಗಳಾದ ಮತ್ತು ಶ್ರೀ ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ. ಎನ್.ನಾಂದಣಿ ಸರ್ ಇವರು ಮಹಿಳೆ ಅಬಲೆ ಅಲ್ಲ, ಸಬಲೆ ಮತ್ತು ಧರ್ಮನಿಷ್ಠಳು ಎಂದು ಜನಗೊಂಡು ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದು ವಿವಿಧ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹ  ನೀಡುತ್ತಾ, ಶ್ರೀ ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಶೇಡಬಾಳ ಗ್ರಾಮದಲ್ಲಿ ದಿನಾಂಕ: 23-01-1998 ರಂದು ಮಾಜಿ ಶಾಸಕರಾದ ಶ್ರೀಯುತ ಮೋಹನರಾವ್ ಹೆಚ್.ಶಹಾ  ಅವರ ಧರ್ಮಪತ್ನಿಯಾದ ಶ್ರೀಮತಿ ರಂಜನಾ ಶಹಾರವರ ಹಸ್ತದಿಂದ ನಮ್ಮ ಮಹಿಳಾ ಮಂಡಳವನ್ನು ಉದ್ಘಾಟಿಸಿ ಅದರ ಕಾರ್ಯಚಟುವಟಿಕೆಗಳಿಗೆ ಚಾಲನೆಯನ್ನು ನೀಡಿದರು. ನಮ್ಮ ಮಹಿಳಾ ಮಂಡಳವು ಸದ್ಯ 370 ಜನರನ್ನು ಒಳಗೊಂಡಿದ್ದು ೩೫ ಜನ ಸದಸ್ಯರು ಆಡಳಿತ ಮಂಡಳಿಯಲ್ಲಿದ್ದೇವೆ.

ನಮ್ಮ ಮಹಿಳಾ ಮಂಡಳ ಪ್ರಾರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೆ ನಿರಂತರವಾಗಿ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾ ಧರ್ಮ ಪ್ರಚಾರ ಮಾಡುತ್ತಿದ್ದೇವೆ. 

ಸನ್ 2007 ರಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಹೋದರಿಯಾದ ಪದ್ಮಲತಾ ನಿರಂಜನಕುಮಾರ ಇವರ ಹಸ್ತದಿಂದ ದಶಲಕ್ಷಣ ಪರ್ವವನ್ನು ಉದ್ಘಾಟಿಸಿ ಆಚರಿಸುತ್ತಾ ಬಂದಿದ್ದೇವೆ. 

ಪ್ರತಿ ವರ್ಷ 2 ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. 

ಕಸೂತಿ ತರಬೇತಿಗಳನ್ನು ನಡೆಸುತ್ತಾ ಬಂದಿದ್ದೇವೆ. ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಹೊಲಿಗೆ ಯಂತ್ರ, ಹೈನುಗಾರಿಕೆಗೆ ಸಹಾಯ ಮಾಡುತ್ತಿದ್ದೇವೆ. 

ಪ್ರತಿ ಹಬ್ಬಕ್ಕೆ ವಿವಿಧ ಸ್ಪರ್ಧೆಗಳು ಅಂದರೆ ಆಹಾರದ ಮಹತ್ವ, ಸಾಂಸ್ಕೃತಿಕ ಚಟುವಟಿಕೆಗಳು, ಸಂಸ್ಕಾರದ ಕುರಿತು ಉಪನ್ಯಾಸ ಹೀಗೆ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಂಡಿರುತ್ತೇವೆ. 

4 ಹೆಣ್ಣು ಮಗುವಿನ ಭ್ರೂಣ ಹತ್ಯೆಯ ಬಗ್ಗೆ ಪ್ರೊಜೆಕ್ಟರ್ ಮೂಲಕ ತೋರಿಸಿ ಮಹಿಳೆಯರಿಗೆ  ಅರಿವು ಮೂಡಿಸಲಾಯಿತು. 

ಸನ್ 2018ರಲ್ಲಿ ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕ ಸಮಯದಲ್ಲಿ ಸುಮಾರು 2000 ಮಹಿಳೆಯರು ಒಗ್ಗೂಡಿ ಶ್ವೇತ ವಸ್ತ್ರ ಧರಿಸಿ ಕರ್ನಾಟಕದಲ್ಲಿಯೇ ಎರಡನೆಯ ಅತೀ ದೊಡ್ಡ ಗೊಮ್ಮಟ ಸ್ತುತಿ ಕಾರ್ಯಕ್ರಮವನ್ನು ಸುಬಲಸಾಗರ ಪ್ರೌಢ ವಿದ್ಯಾಮಂದಿರದಲ್ಲಿ ನಡೆಸಿದ್ದೇವೆ. ತದನಂತರ ಓಂಕಾರ ಮಹಾಮಂತ್ರ ನೃತ್ಯದೊಂದಿಗೆ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಸ್ತುತಿ ಮಾಡಿದೆವು. 

ನಿರಂತರವಾಗಿ ತ್ಯಾಗಿಗಳ ಆಹಾರ ದಾನ ಹಾಗೂ ವೈಯಾವ್ರತವನ್ನು ಮಾಡುತ್ತಾ ಬಂದಿದ್ದೇವೆ. 

ಹಲವಾರು ಪಂಚಕಲ್ಯಾಣಕಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ಮಹಿಳೆಯರು ಸೇರಿ ಸಹಕಾರವನ್ನು ನೀಡುತ್ತಿದ್ದೇವೆ. 

ಸನ್ 2019ರಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಬಳಲಿದ ಜನರಿಗೆ ಔಷಧ, ಆಹಾರದಾನ ಮತ್ತು ವಸ್ತ್ರ ದಾನವನ್ನು ಮಾಡಿದ್ದೇವೆ. 

ಕೊರೊನಾ ಮಹಾಮಾರಿ ಸಮಯದಲ್ಲಿ ಷೋಢಶಕಾರ ವ್ರತ ಮತ್ತು ದಶಲಕ್ಷಣ ಪರ್ವದ ವ್ರತಾಚರಣೆ ಮಾಡಲು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. 

ಸನ್ 2019ರಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಎರಡು ದಿನದ ಸಮಾವೇಶವನ್ನು ಸುಬಲಸಾಗರ ಪ್ರೌಢ ವಿದ್ಯಾಮಂದಿರ ಶೇಡಬಾಳದಲ್ಲಿ ಯಶಸ್ವಿಗೊಳಿಸಿದ್ದೇವೆ. 

ಅದೇ  ರೀತಿ ಪ್ರತಿ ವರ್ಷ ಹಲವಾರು ಸ್ಪರ್ಧೆಗಳನ್ನು ಹಾಗೂ ಚಟುವಟಿಕೆಗಳನ್ನು ಮಾಡಿ, ವಾರ್ಷಿಕ ಸ್ನೇಹ  ಸಮ್ಮೇಳನ ಮಾಡಿ ಬಹುಮಾನಗಳನ್ನು ಕೊಡುತ್ತಾ ಬರುತ್ತಿದ್ದೇವೆ. 

ಅಧ್ಯಕ್ಷರ ದೂರವಾಣಿ ಸಂಖ್ಯೆ : 9146878992

ಕಾರ್ಯದರ್ಶಿಗಳ ದೂರವಾಣಿ ಸಂಖ್ಯೆ : 8197456789

ಶ್ರೀ ಕೃಷ್ಣ ಅಭಿವೃದ್ಧಿ ಸಮಿತಿ ಮಹಿಳಾ ಮಂಡಲ ಸೇಡಬಾಳ – 9148289920

Sl No. ID No. Name Designation Contact Number Photo