Members
ಶ್ರೀ ಸೂರ್ಯೋದಯ ಸುಜಲ ಕಿರು ಜಲಾನಯನ ಸಂಘ, ಸತ್ತೂರ, ಧಾರವಾಡ, ನೋಂದಣಿ: 416-2014-2015
ಸತ್ತೂರ ಗ್ರಾಮವು ಹುಬ್ಬಳ್ಳಿ ಧಾರವಾಡ ನಗರ ಸಭೆಯ 26ನೇ ವಾರ್ಡಿನಲ್ಲಿ ಬರುತ್ತಿದ್ದು, ಸನ್ 2006 ನೇ ಇಸ್ವಿ ಸೆಪ್ಟೆಂಬರ್ ೪ರಿಂದ 13/04/2006ರವರೆಗೆ ಶ್ರೀ ಭಗವಾನ್ ಸಾವಿರದ ಎಂಟು ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಮಾಡಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಪಂಚಕಲ್ಯಾಣವನ್ನು ಪರಮಪೂಜ್ಯ 108 ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಶಿಷ್ಯರಾದ 108 ಸುಖಸಾಗರ ಮಹಾರಾಜರ ಸಾನಿಧ್ಯದಲ್ಲಿ ಶ್ರೀ ಸೋಮದೇವ ಭೈಯಾಜಿತ್ ಮಾರ್ಗದರ್ಶನದಲ್ಲಿ ಪೂಜ್ಯ ಡಾಕ್ಟರ್ ವೀರೇಂದ್ರ ಹೆಗಡೆಯವರ ಸಹಕಾರದಿಂದ ಹಾಗೂ ಡಾಕ್ಟರ್ ನಿರಂಜನ ಕುಮಾರ ಮತ್ತು ಶ್ರೀಮತಿ ಪದ್ಮಲತ ಅಮ್ಮನವರ ಸಹಾಯದೊಂದಿಗೆ ಪಂಚಕಲ್ಯಾಣವು ನಿರ್ವಿಘ್ನವಾಗಿ ಸಂಪೂರ್ಣವಾಗಿ ಸಂಪೂರ್ಣವಾಯಿತು. ದಿನಾಂಕ 14/09/2018ರಲ್ಲಿ ದಶಲಕ್ಷಣ ಪರ್ವದ ಉದ್ಘಾಟನೆ 16ನ್ನು ಮಾತೃಶ್ರೀ ರತ್ನಮ್ಮ ಮಹಿಳಾ ಮಂಡಲವನ್ನು ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ಇವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿರುತ್ತಾರೆ. ನಾವು ಪ್ರತಿ ವರ್ಷ ಚಾತುರ್ಮಾಸದ ದಶಲಕ್ಷಣ ಪರ್ವ ಹತ್ತು ದಿನಗಳಲ್ಲಿ ಉಪನ್ಯಾಸಕರನ್ನು ಕರೆಸಿ, ಧರ್ಮದ ಬಗ್ಗೆ ತಿಳಿದುಕೊಳ್ಳುತ್ತೇವೆ. ಅದರ ಪೂರ್ವದಲ್ಲಿ ಆರತಿ ಭಜನೆ ಮಾಡುತ್ತೇವೆ.
2016ರಲ್ಲಿ ಪೂಜ್ಯ ನಿರ್ಮಲ ಸಾಗರ ಮಹಾರಾಜರ ಶಿಷ್ಯರಾದ ಪೂಜ್ಯ 108 ಕೊಂಡ ಕೊಂಡ ಮಹಾರಾಜರ ಚಾತುರ್ಮಾಸವನ್ನು ಮಾಡಿ ಧರ್ಮದ ಕಾರ್ಯದಲ್ಲಿ ನಿರತರಾದೆವು. ಪ್ರತಿ ರವಿವಾರ ಸುದರ್ಶನ ನೋಂಪಿ ಭಕ್ತರ ಆರಾಧನೆ ಶಾಂತಿ ವಿಧಾನ ಇತ್ಯಾದಿಗಳನ್ನು ಮಾಡಿ ಕೊನೆಗೆ ವಿಜೃಂಭಣೆಯಿಂದ ಧರ್ಮದ ಪ್ರಭಾವನೆ ಮಾಡಿ ವಿದ್ಯಾಪನೆಯನ್ನು ಮಾಡಿದೆವು.
2022ರಲ್ಲಿ ಪರಮಪೂಜ್ಯ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಶಿಷ್ಯರಾದ ಪರಮಪೂಜ್ಯ 108 ಸುಖಸಾಗರ ಮಹಾರಾಜರ ಸಾನಿಧ್ಯದಲ್ಲಿ ಚಾತುರ್ಮಾಸವನ್ನು ಮಾಡಲಾಯಿತು. ಅವರು ಪ್ರತಿ ದಿನ ಬೆಳಿಗ್ಗೆ ಅಭಿಷೇಕ ಮಧ್ಯಾಹ್ನ ಪ್ರವಚನ ಸಾಯಂಕಾಲ ಭಕ್ತಾಮರ ಸ್ತೋತ್ರ, ಧರ್ಮದ ಬಗ್ಗೆ ಪ್ರಶ್ನೋತ್ತರಗಳನ್ನು ಬರೆಸುತ್ತಿದ್ದರು ಮತ್ತು ಆರತಿ, ಭಜನೆಗಳನ್ನು ಮಾಡುತ್ತಿದ್ದೆವು. ನಂತರ ಪ್ರತಿ ರವಿವಾರ ಪರೀಕ್ಷೆಗಳನ್ನು ಬರೆಸಿ ಬಹುಮಾನಗಳನ್ನು ವಿತರಿಸುತ್ತಿದ್ದರು. ಈ ಎಲ್ಲಾ ಕಾರ್ಯಗಳಿಂದ ನಮ್ಮ ಊರಿನಲ್ಲಿ ತುಂಬಾ ಧರ್ಮದ ಪ್ರಭಾವನೆಯಾಯಿತು. ಇವರ ಸಾನ್ನಿಧ್ಯದಲ್ಲಿ 24 ಗಂಟೆಗಳ ಕಾಲ ಭಕ್ತಾಮರ ಸ್ತೋತ್ರದ ಪಠಣೆಯನ್ನು ಮಾಡಿದೆವು.
Sl No. | ID No. | Name | Designation | Contact Number | Photo |
---|