ಶ್ರುತದೇವಿ ಮಹಿಳಾ ಮಂಡಲ, ಬಸ್ತವಾಡ ಹುಕ್ಕೇರಿ

ದಿನಾಂಕ: 10/06/2014 ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ “ಶೃತದೇವಿ ಜೈನ ಮಹಿಳಾ ಮಂಡಳಿ”ಯನ್ನು ದ್ವೀಪ ಪ್ರಜ್ವಲನೆಯೊಂದಿಗೆ ಲೋಕಾರ್ಪಣೆ ಮಾಡಲಾಯಿತು. ಈ ಮಹಿಳಾ ಮಂಡಳದ ಅಧ್ಯರಾಗಿ ಶ್ರೀಮತಿ ಸುರೇಖಾ ಸುಭಾಷ ಮಗದುಮ್ಮ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತ್ರಿಶಲಾ ನಾಗಪ್ಪ ಮಗದುಮ್ಮ, ಶ್ರೀಮತಿ ಲತಾ ಧರಣೇಂದ್ರ ಮಗದುಮ್ಮ ಇವರು ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. 

ಇವರೆಲ್ಲರೂ ತಮ್ಮೂರಿನ ಜೈನ ಮಹಿಳೆಯರಲ್ಲಿ ಧರ್ಮ ಜಾಗೃತಿ ಮೂಡಿಸಿ ಒಗ್ಗಟ್ಟಿನಿಂದ ತ್ಯಾಗಿಗಳಿಗೆ ಆಹಾರದಾನ ವೈಯ್ಯಾವೃತ್ತವನ್ನು ಮಾಡುತ್ತಾ ಬಂದಿರುತ್ತಾರೆ. ದಸರಾ ಉತ್ಸವದಲ್ಲಿ ದಶಧರ್ಮ ಹಾಗೂ ಶೋಢಷಕಾರಣ ಕುರಿತು ಚರ್ಚಿಸಿ ನೋಂಪಿ ವ್ರತ ಬೆಳಗುತ್ತಿದ್ದಾರೆ. ಯರನಾಳದಲ್ಲಿ ಶಾಂತಿಸಾಗರ ಮಹಾರಾಜರ ದೀಕ್ಷಾ ಶತಮಾನೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.  

ಶ್ರೀ 105 ಜ್ಞಾನಮತಿ ಮಾತಾಜಿಯವರ ಸಾನಿಧ್ಯದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮಚಕ್ರ ಆರಾಧನಾ ಮಹಾಮಹೋತ್ಸವವನ್ನು ಯಶಸ್ವಿಯಾಗಿ ಮಾಡಿರುತ್ತಾರೆ. ಅದೇ ರೀತಿ ಗ್ರಾಮದ ಇನ್ನುಳಿದ ಶ್ರಾವಕ/ಶ್ರಾವಕಿಯರ ಸಹಕಾರದೊಂದಿಗೆ ಪಕ್ಕದ ಹಳ್ಳಿ ಬೆಣಿವಾಡದಲ್ಲೂ ಸಹ ಶ್ರೀ 1008 ಚಿಂತಾಮಣಿ ಪಾರ್ಶ್ವನಾಥ ಭಗವಾನರ ಪಂಚಕಲ್ಯಾಣ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಜೈನ ಧರ್ಮ ಸಂಸ್ಕಾರ ಶಿಬಿರಗಳಲ್ಲೂ ಶ್ರಮಿಸಿದ್ದಾರೆ. 

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿಗಳಿಂದ ಧನಸಹಾಯ ಒದಗಿಸಿದ್ದಾರೆ. ದಸರಾ ಉತ್ಸವ ಹಾಗೂ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ನಡೆಸುವುದರ ಮೂಲಕ ಮಹಿಳಾ ಮಂಡಳವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ. ತಾಲ್ಲೂಕು ಮಟ್ಟದ ಪ್ರತಿಯೊಂದು ಸಭೆ-ಸಮಾರಂಭದಲ್ಲಿ ಪಾಲ್ಗೊಂಡು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಮೂಲಕ ಪ್ರೇರಣೆ ನೀಡುತ್ತಾ ಬಂದಿದ್ದಾರೆ. 

ಈ ರೀತಿಯಾಗಿ ನಮ್ಮ ಮಹಿಳಾ ಮಂಡಳವು ಸಮಾಜಮುಖ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಪರಿವರ್ತನೆಗಾಗಿ ಹಗಲಿರುಳು ಕಾರ್ಯಪ್ರವೃತ್ತರಾಗಿದ್ದಾರೆ.

ಶೃತದೇವಿ ಮಹಿಳಾ ಮಂಡಲ ಬಸ್ತವಾಡ ಹುಕ್ಕೇರಿ - 8792545228

Sl No. ID No. Name Designation Contact Number Photo