ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ
Padmalatha (Dharwad)
9535633362
ದಿನಾಂಕ 01-02-2025ರ ಶನಿವಾರ ದಂದು ಧಾರವಾಡದಲ್ಲಿ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಪ್ರಸಕ್ತ ಸಾಲಿನ ಪ್ರಥಮ ವಲಯ ಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು. ಶ್ರೀಮತಿ ಪದ್ಮಲತಾ ಅವರ ನೇತೃತ್ವದಲ್ಲಿ, ಧಾರವಾಡದ ಸಮ್ಯಕ್ ಪ್ರಜ್ಞಾ ಮಹಿಳಾ ಸಮಾಜದ ಕಾರ್ಯಕರ್ತರು ಅತಿಥ್ಯವನ್ನು ವಹಿಸಿದ್ದರು.
ಸುಂದರವಾದ ಮೆರವಣಿಗೆಯೊಂದಿಗೆ ಅತಿಥಿಗಳನ್ನು ಬರಮಾಡಿಕೊಂಡು, ಜಿನಬಿಂಬದೊಂದಿಗೆ ಸಾಗುತ್ತಾ, ವೇದಿಕೆಯಲ್ಲಿ ಜಿನಬಿಂಬವನ್ನು ಪ್ರತಿಷ್ಟಾಪಿಸುವುದರ ಜೊತೆಗೆ, ಜಿನಜಾಗೃತಿಯನ್ನು ಎಲ್ಲರ ಮನದಲ್ಲಿ ಮೂಡಿಸಲಾಯಿತು. ಶ್ರೀಮತಿ ಪದ್ಮಲತಾ ಅವರ ಅರ್ಥಪೂರ್ಣ ನುಡಿಗಳು ಒಕ್ಕೂಟದ ಬಗೆಗಿನ ಅವರ ಕಾಳಜಿ, ಪ್ರೀತಿಯನ್ನು ಪ್ರಸ್ತುತಪಡಿಸಿದವು
ಶ್ರೀಮತಿ ಪದ್ಮಲತಾ ಹಾಗೂ ಶ್ರೀ ಡಾ.ನಿರಂಜನ್ ದಂಪತಿಗಳ ಸರಳ ಸುಂದರ ವ್ಯಕ್ತಿತ್ವ ಎಲ್ಲರ ಮನಸೊರೆಗೊಂಡಿತು.ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅರಿವು ಮೂಡಿಸುವ ಆರೋಗ್ಯ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ರುಚಿ, ಶುಚಿಯಾದ ಸಾವಯವ ಉಪಾಹಾರ, ಭೋಜನಗಳು, ಹೊಟ್ಟೆ ತುಂಬಿಸುವುದರ ಜೊತೆ, ಕಣ್ಮನ ತಣಿಸಿದವು.
ಮಧ್ಯಾಹ್ನ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕ್ರಮವು,ಒಕ್ಕೂಟದ ಪದಾಧಿಕಾರಿಗಳು, ಸಮಸ್ತ ನಿರ್ದೇಶಕರು, ಹುಬ್ಬಳ್ಳಿ, ಧಾರವಾಡ... ವಲಯದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೊಂದಿಗೆ ನೆರವೇರಿತು.
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್ ಅವರು, ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀಮತಿ ಡಾ. ನೀರಜಾ ನಾಗೇಂದ್ರಕುಮಾರ್ ಮತ್ತು ಚಂದ್ರಕಲಾ ಸೊಲ್ಲಪುರೆ ಉಪಸ್ಥಿತರಿದ್ದರು. ಸಾಮೂಹಿಕ
ಣಮೋಕಾರ ಮಂತ್ರದೊಂದಿಗೆ ಸಭೆ ಪ್ರಾರಂಭ ವಾಯಿತು.ಶ್ರೀಮತಿ ವರ್ಷ ಸುಧೀರ್ ಪ್ರಾರ್ಥಿಸಿದರು.ಕಾರ್ಯದರ್ಶಿ ಶ್ರೀಮತಿ ಹರ್ಷ ನಾಗರಾಜ್,ಪ್ರಾಸ್ಥಾವಿಕ ನುಡಿಗಳಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟವು ನಡೆದು ಬಂದ ದಾರಿಯನ್ನು ಪ್ರಸ್ತುತ ಪಡಿಸುತ್ತಾ, ಜೈನ ಮಹಿಳಾ ಒಕ್ಕೂಟವು, ಮಹಿಳಾ ಸಮಾಜಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ವದಾ ಸಹಾಯಕ ವಾಗಿರುತ್ತದೆಂದು ತಿಳಿಸಿದರು ಮತ್ತು ಕಾರ್ಯಕ್ರಮ ವನ್ನು ನಿರೂಪಿಸಿದರು.ಜಂಟಿ ಕಾರ್ಯದರ್ಶಿ ಶ್ರೀಮತಿ ಕವಿತ ಸ್ವಾಗತಿಸಿದರು.
ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮಾಜಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಳ್ಳಬೇಕೆಂದು ಹೇಳುತ್ತಾ, ಸಮಾಜಗಳಿಗೆ ಪ್ರಗತಿಪರ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ಉಪಾಧ್ಯಕ್ಷರಾದ ಶ್ರೀಮತಿ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಮಹಿಳಾ ಸಮಾಜಗಳು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಮಹಿಳಾ ಸಮಾಜಗಳ ಕಾರ್ಯದರ್ಶಿಗಳು ತಮ್ಮ ಮಹಿಳಾ ಸಮಾಜಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಪ್ರಸ್ತುತ ಪಡಿಸಿದರು. ಆಯ್ದ ಕೆಲವು ವಲಯ ನಿರ್ದೇಶಕರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪದಿಸಿದರು. ಖಜಾಂಚಿ ಶ್ರೀಮತಿ ರೂಪ ಸಂಜಯ್ ಎಲ್ಲರಿಗೂ ವಂದಿಸಿದರು. ಕಾರ್ಯಕ್ರಮ ಅರ್ಥಪೂರ್ಣ ವಾಗಿದ್ದು ಅಭೂತಪೂರ್ವವಾಗಿ ಯಶಸ್ವಿಯಾಯಿತು.
ಜೈನಂ ಜಯತು ಶಾಸನಂ