ಹುಬ್ಬಳ್ಳಿಯಲ್ಲಿ ಅನಂತನಾಥ ಬಸದಿಯಲ್ಲಿ ಪದ್ಮಾವತಿ ಮಹಿಳಾ ಮಂಡಳ ಕಾರ್ಯಕ್ರಮ

ಹುಬ್ಬಳ್ಳಿಯಲ್ಲಿ ಅನಂತನಾಥ ಬಸದಿಯಲ್ಲಿ ಪದ್ಮಾವತಿ ಮಹಿಳಾ ಮಂಡಳ ಕಾರ್ಯಕ್ರಮ

prayer thumb
ಹುಬ್ಬಳ್ಳಿಯಲ್ಲಿ ಅನಂತನಾಥ ಬಸದಿಯಲ್ಲಿ ಪದ್ಮಾವತಿ ಮಹಿಳಾ ಮಂಡಳದ ಆಯೋಜನೆಯಲ್ಲಿ ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ರಾಜಸ್ಥಾನ್ ಬಿವಡಿ ಸಹಯೋಗದೊಂದಿಗೆ ಅಭೂತಪೂರ್ವ ಕಾರ್ಯಕ್ರಮವನ್ನು ನಡೆಸಿಕೊಟ್ಟೆವು
 

ಎಲ್ಲರಿಗೂ ಜೈ ಜಿನೇಂದ್ರ 🙏☺️ ಇವತ್ತಿನ ದಿನ ಅಂದರೆ 1-3-2025 ನಾವು ಹುಬ್ಬಳ್ಳಿಯಲ್ಲಿ ಅನಂತನಾಥ ಬಸದಿಯಲ್ಲಿ ಪದ್ಮಾವತಿ ಮಹಿಳಾ ಮಂಡಳದ ಆಯೋಜನೆಯಲ್ಲಿ ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ರಾಜಸ್ಥಾನ್ ಬಿವಡಿ ಸಹಯೋಗದೊಂದಿಗೆ ಅಭೂತಪೂರ್ವ ಕಾರ್ಯಕ್ರಮವನ್ನು ನಡೆಸಿಕೊಟ್ಟೆವು ಆ ಕಾರ್ಯಕ್ರಮದಲ್ಲಿ ಗೌಜಿ ಗದ್ದಲಗಳು ಇರಲಿಲ್ಲ ಕರ್ಣ ಕಠೋರವಾದ ಡಿಜೆ ಸೌಂಡ್ ಇರಲಿಲ್ಲ ಒಂದು ಪ್ರಶಾಂತ ವಾತಾವರಣದಲ್ಲಿ ಒಂದು ಸುಂದರ ಕಾರ್ಯಕ್ರಮವನ್ನು ನಡೆಸಿಕೊಟ್ಟ ಹೆಮ್ಮೆ ಪದ್ಮಾವತಿ ಮಹಿಳಾ ಮಂಡಲಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸಿತು ಮುಖ್ಯ ಅತಿಥಿಗಳಾದಂತ ಅಶೋಕ್ ಜೈನ್ ಸರ್ ದೆಹಲಿ  ಆಶಾ ಸುದರ್ಶನ್ ಜೈನ್ ದೆಹಲಿ ಉಪಸ್ಥಿತಿಯಲ್ಲಿ ವಿಮಲ್ ತಾಳಿಕೋಟಿ ಮಹೇಶ್ ಕಾಸ್ಸರ್ ವಿನಾಯಕ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜೈನ್ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಪ್ರಕಾಶ್ ಅವರ ಉಪಸ್ಥಿತಿಯಲ್ಲಿ ಪದ್ಮಾವತಿ ಮಹಿಳಾ ಮಂಡಳದ ಅಧ್ಯಕ್ಷರಾದಂತ ಸುಧಾ ಸಿರುಗುಪ್ಪಿ  ಇವರ ಅಧ್ಯಕ್ಷತೆಯಲ್ಲಿ ವಸಂತ ಜೈನ್ ಇವರ ನಿರೂಪಣೆಯಲ್ಲಿ ಅವರಿವರನ್ನದೆ ಪದ್ಮಾವತಿ ಮಹಿಳಾ ಮಂಡಳದ ಸರ್ವ ಸದಸ್ಯರ ಸಹಕಾರದೊಂದಿಗೆ ನಾವು ಅಂದರೆ ಪದ್ಮಾವತಿ ಮಹಿಳಾ ಮಂಡಳ ಇಂದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಗೆ ತರಬೇತಿ ಕೊಡುವುದು ಅವರು ತರಬೇತಿ ಪಡೆದ ನಂತರ ಅವರಿಗೆ ಒಂದೊಂದು ಮಿಷನ್ ಕೂಡ ಅವರ ಜೀವನೋಪಾಯಕ್ಕಾಗಿ ಕೊಡುವುದು ಇದರೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಅವರಿಗೆ ಆಹಾರ ಧಾನ್ಯದ ಕೆಟ್ಟುಗಳನ್ನು ವಿತರಿಸುವುದು ಹಾಗೂ  ಜೈನರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವಂತಹ ಮಹತ್ತರವಾದ ಕೆಲಸವನ್ನು ಈ ದಿನ ನಾವು ಮಾಡಿದೆವು ನಮಗೆ ಬೆನ್ನೆಲುಬಾಗಿ ವರ್ಧಮಾನ್  ಪರಿವಾರ ಸೇವಾ ಟ್ರಸ್ಟ್ ನಿಂತುಕೊಂಡಿತು ಅಶೋಕ್ ಸರ್ ಅವರ ಮೇರು ವ್ಯಕ್ತಿತ್ವ ನಮ್ಮನ್ನುಮೂಕ ವಿಸ್ಮಿತರನ್ನಾಗಿಸಿತು ಒಬ್ಬ ಮನುಷ್ಯ ಅಥವಾ ಒಂದು ಟ್ರಸ್ಟ್ ಜೀವನದಲ್ಲಿ ಇಷ್ಟೆಲ್ಲಾ ಸಾಧಿಸಬಹುದೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಾಯಿತು
 ಅವರ ಮಾತನ್ನು ಕೇಳುತ್ತಾ ಸಭಿಕರಲ್ಲ  ಮಂತ್ರ ಮುಗ್ಧರಾಗಿ ಕುಳಿತಿದ್ದರು ಅವರ ಮಾತು ಮುಗಿದಾಗಲೇ ಇಹಲೋಕದ ಅರಿವಾದದ್ದು ಅವರ ಮಾತಿನಿಂದ ಅನೇಕರು ಸ್ವಯಂ ಪ್ರೇರಿತರಾಗಿ   ನಾನು ನನ್ನ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಮನಸ್ಸಿನಲ್ಲಿಯೇ ಪಣತೊಟ್ಟರು ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಪ್ರತಿ ವರ್ಷ ಇಂತಹ ಕೆಲಸಕ್ಕೆ ಇಷ್ಟು ಹಣವನ್ನು ಕೊಡುತ್ತೇವೆ ಎಂದು ವಾಗ್ದಾನವನ್ನು ಕೂಡ ಮಾಡಿದರು ಇಷ್ಟೊಂದು ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟಂತ ಪದ್ಮಾವತಿ ಮಹಿಳಾ ಮಂಡಲಕ್ಕೆ ಇದೊಂದು ಹೆಮ್ಮೆಯ ವಿಷಯವಾಗಿದೆ ನಮ್ಮ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಎಲ್ಲಾ ಮಹಿಳಾ  ಮಂಡಳಗಳ ಅಧ್ಯಕ್ಷರು ಸದಸ್ಯರು ಆಗಮಿಸಿದ್ದು ವಿಶೇಷವಾಗಿತ್ತು ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು ಈ ಕಾರ್ಯಕ್ರಮಕ್ಕೆ ತಮ್ಮ ಅತ್ಯಮೂಲ್ಯ ಸಮಯವನ್ನು ಮೀಸಲಿಟ್ಟಂತ ವಿನಾಯಕ ಸಮ್ಮತಿ ಮಹೇಶ್ ಕಾಸರ್ ಇವರಿಗೆ ಮತ್ತೊಮ್ಮೆ ಮಗದೊಮ್ಮೆ ನಮ್ಮ ಧನ್ಯವಾದಗಳು ನಮ್ಮ ಕೊನೆ ಕ್ಷಣದ ಕರೆಗೆ ಓಗೊಟ್ಟು ದಾವಣಗೆರೆಯಿಂದ ಸಮಯಕ್ಕೆ ಸರಿಯಾಗಿ ಆಗಮಿಸಿ ನಮ್ಮನ್ನೆಲ್ಲ ಹುರಿದುಂಬಿಸಿದಂತ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿಕೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನು ನೀಡಿದಂತಹ  ಅಖಿಲ ಕರ್ನಾಟಕ ಜೈನ್ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಪ್ರಕಾಶ್ ಅವರಿಗೂ ನಮ್ಮ ಪದ್ಮಾವತಿ ಮಹಿಳಾ ಮಂಡಳದಿಂದ ಅನೇಕ ಧನ್ಯವಾದಗಳು
 ಸಮಯದ ಅಭಾವದಿಂದ ಅನೇಕ
 ವಿಷಯಗಳು ಉಳಿದು ಹೋದವು ಅದಕ್ಕಾಗಿ ಕ್ಷಮೆ ಇರಲಿ ಕಾರ್ಯಕ್ರಮ ಮಾಡಬೇಕೆಂದುಕೊಂಡಾಗಿನಿಂದಲೂ ತಮ್ಮ ತನುಮನ ದಿಂದ ಸಹಾಯ ಮಾಡಿದ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರೆಲ್ಲರಿಗೂ ಅನಂತಾನಂತ ಧನ್ಯವಾದಗಳು ಹುಬ್ಬಳ್ಳಿಯಲ್ಲಿ  ಇಂತಹ ಇನ್ನೂ ಅನೇಕ  ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸುತ್ತಾ ಪದ್ಮಾವತಿ ಮಹಿಳಾ ಮಂಡಲವು ತಮ್ಮೆಲ್ಲರಿಗೂ ಶಿರಬಾಗಿ ಧನ್ಯವಾದಗಳು ಅರ್ಪಿಸುತ್ತಿದೆ ವರ್ದ್ಮಾನ್ ಸೇವಾ ಪರಿವಾರ ಟ್ರಸ್ಟ್ ಇವರ ಯಾವುದೇ ಕಾರ್ಯಕ್ರಮಕ್ಕೂ ಪದ್ಮಾವತಿ ಮಹಿಳಾ ಮಂಡಲವು ತನ್ನ ಕೈಲಾದ ಸೇವೆಯನ್ನು ನೀಡುತ್ತದೆ ಎಂದು ಈ ಮೂಲಕ ನಾವು ದೃಢಪಡಿಸುತ್ತೇವೆ 

 ಮಂಡಳದ ಕಾರ್ಯದರ್ಶಿ ವಸಂತಾ  ಜೈನ್