ಭಾರತೀಯ ಜೈನ್ ಮಿಲನ್
ಭಾರತೀಯ ಜೈನ್ ಮಿಲನ್
ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್,ವಲಯ 8 , ಜಿನ ಭಜನಾ ಸೀಸನ್ 8 ಇದರ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ , ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ, ಶ್ರೀ ಮಂಜುನಾಥ ಸ್ವಾಮಿ ಕಲಾ ಮಂಟಪ ಬೆಳ್ತಂಗಡಿಯಲ್ಲಿ ನವೆಂಬರ್ ತಿಂಗಳ 24 ಭಾನುವಾರ ಜರಗಲಿದೆ, ಶ್ರೀ ಡಿ, ಸುರೇಂದ್ರ ಕುಮಾರ್ ,ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಂತೆ ಸಮಾಲೋಚನಾ ಸಭೆ ದಿನಾಂಕ 5/9/2024 ಹಾಗೂ 21/10/2024 ರಂದು ಉಜಿರೆಯಲ್ಲಿ ಜರಗಿತು. ವಲಯ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್,ವೀರಾಂಗ ನ ಶ್ರೀಮತಿ ಸೋನಿಯಾ ಯಶೋವರ್ಮ,ಶ್ರೀ ಪೂರನ್ ವರ್ಮ, ವಿಭಾಗ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ,ವೇಣೂರು ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ವೀರ್ ಪ್ರವೀಣ್ ಕುಮಾರ್, ವಲಯ ನಿರ್ದೇಶಕರಾದ ವೀರ್ ಬಿ.ಸೋಮಶೇಖರ್ ಶೆಟ್ಟಿ,ವೀರ್ ಪ್ರಮೋದ್ ಕುಮಾರ್,ವೀರಾಂಗಾ ನ ರಾಜಶ್ರೀ ಸುದರ್ಶನ್ ಮತ್ತು , ಶ್ರೀಮತಿ ತ್ರಿಶಾಲ ಉದಯಕುಮಾರ್ ಮಲ್ಲ,ಶ್ರೀಮತಿ ರಜತ ಪಿ ಶೆಟ್ಟಿ,ಪೂರ್ವ ಅಧ್ಯಕ್ಷರು, ವೀರ,ವೀರಾಂಗನೆಯರು ಭಾಗವಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು,ಡಾಕ್ಟರ್ ನವೀನ್ ಕುಮಾರ್ ಜೈನ್ ವಹಿಸಿದ್ದರು
